alex Certify ದಾವಣಗೆರೆಯಲ್ಲಿ ಡಿ ಬಾಸ್ ದರ್ಶನ್ ನೋಡಲು ನೂಕು ನುಗ್ಗಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾವಣಗೆರೆಯಲ್ಲಿ ಡಿ ಬಾಸ್ ದರ್ಶನ್ ನೋಡಲು ನೂಕು ನುಗ್ಗಲು

ದಾವಣಗೆರೆ: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಕುದುರೆ, ಹಸು, ಎತ್ತು ಸೇರಿ ಹಲವು ಪ್ರಾಣಿ-ಪಕ್ಷಿಗಳನ್ನು ಅವರು ಸಾಕಿದ್ದಾರೆ.

ಹೈನುಗಾರಿಕೆ ಬಗ್ಗೆ ಮಾಹಿತಿ ಪಡೆಯಲು ಹಲವು ಫಾರ್ಮ್ ಗಳಿಗೆ ಭೇಟಿ ನೀಡುತ್ತಾರೆ. ಇತ್ತೀಚೆಗಷ್ಟೇ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಫಾರ್ಮ್ ಗೆ ಭೇಟಿ ನೀಡಿದ್ದ ದರ್ಶನ್ ನಿನ್ನೆ ದಾವಣಗೆರೆಯಲ್ಲಿ ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್ಎಸ್ ಮಲ್ಲಿಕಾರ್ಜುನ್ ಅವರ ಫಾರ್ಮ್ ಗೆ ಭೇಟಿ ನೀಡಿದ್ದಾರೆ.

ಎಸ್ಎಸ್ ಮಲ್ಲಿಕಾರ್ಜುನ್ ದುಬಾರಿ ಬೆಲೆಯ ಇಪ್ಪತ್ತಕ್ಕೂ ಹೆಚ್ಚು ಕುದುರೆಗಳನ್ನು ಸಾಕಿದ್ದಾರೆ. ಅಲ್ಲದೆ ವಿವಿಧ ತಳಿಯ ಹಸುಗಳನ್ನು ಅವರು ಸಾಕಿದ್ದು ಹೈನುಗಾರಿಕೆ ಬಗ್ಗೆ ಮಾಹಿತಿ ಪಡೆಯಲು ದರ್ಶನ್ ಭೇಟಿ ನೀಡಿದ್ದಾರೆ.

ನೆಚ್ಚಿನ ನಟ ಆಗಮಿಸುವುದನ್ನು ತಿಳಿದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಎಸ್ಎಸ್ ಮಲ್ಲಿಕಾರ್ಜುನ್ ನಿವಾಸಕ್ಕೆ ಭೇಟಿ ನೀಡಿದ ದರ್ಶನ್ ಕುದುರೆ ಹಸುಗಳನ್ನು ವೀಕ್ಷಿಸಿ ಮಾಹಿತಿ ಪಡೆದು ತೆರಳಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...