alex Certify ಹಿಂದೂ ದೇವತೆಗಳ ಅವಹೇಳನ ಆರೋಪ: ಸೈಫ್​ ಅಲಿ ಖಾನ್ -ಡಿಂಪಲ್ ಕಪಾಡಿಯಾ ಅಭಿನಯದ ‘ತಾಂಡವ್’​ ವೆಬ್​ ಸಿರೀಸ್ ಗೆ ಎದುರಾಯ್ತು ಸಂಕಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದೂ ದೇವತೆಗಳ ಅವಹೇಳನ ಆರೋಪ: ಸೈಫ್​ ಅಲಿ ಖಾನ್ -ಡಿಂಪಲ್ ಕಪಾಡಿಯಾ ಅಭಿನಯದ ‘ತಾಂಡವ್’​ ವೆಬ್​ ಸಿರೀಸ್ ಗೆ ಎದುರಾಯ್ತು ಸಂಕಷ್ಟ

ತಾಂಡವ್​……ಅಮೆಜಾನ್ ಪ್ರೈಮ್​​ನಲ್ಲಿ ಕೆಲ ದಿನಗಳ ಹಿಂದಷ್ಟೇ ರಿಲೀಸ್​ ಆದ ವೆಬ್​ ಸಿರೀಸ್​ ಇದೀಗ ಹೊಸ ಸಂಕಷ್ಟಕ್ಕೆ ಸಿಲುಕಿದೆ. ವೆಬ್​ಸಿರೀಸ್​ ಹಿಂದೂ ದೇವರುಗಳನ್ನ ಅವಮಾನಿಸಿದ ಆರೋಪದ ಹಿನ್ನೆಲೆ ಚಿತ್ರ ತಯಾರಕರು ಹಾಗೂ ಸ್ಟ್ರೀಮಿಂಗ್​ ಸೇವೆಯ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಬಂಧನದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರ ಬಿಜೆಪಿ ಶಾಸಕ ರಾಮ್ ಕದಮ್​ ನೀಡಿದ ದೂರಿನ ಆಧಾರದ ಮೇಲೆ ಕೇಂದ್ರ ಮಾಹಿತಿ ಹಾಗೂ ಪ್ರಸರಣ ಸಚಿವಾಲಯ ಅಮೆಜಾನ್​ ಪ್ರೈಮ್​ಗೆ ಈ ಬಗ್ಗೆ ವಿವರಣೆ ನೀಡುವಂತೆ ಕೇಳಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಪ್ರಕರಣ ದಾಖಲಾಗಿದೆ.

ಸೈಫ್​ ಅಲಿ ಖಾನ್​ ಹಾಗೂ ಡಿಂಪಲ್​ ಕಪಾಡಿಯಾ ಅಭಿನಯದ ವೆಬ್​ ಸಿರೀಸ್​ ತಾಂಡವ್​ನ ನಿರ್ದೇಶಕ, ನಿರ್ಮಾಪಕ, ಬರಹಗಾರ ಹಾಗೂ ಅಮೆಜಾನ್​ ಇಂಡಿಯಾ ಕಂಟೆಂಟ್​ ಮುಖ್ಯಸ್ಥನ ವಿರುದ್ಧ ಧಾರ್ಮಿಕ ವೈರತ್ವ ಉತ್ತೇಜಿಸುವ ಹಾಗೂ ಪೂಜಾ ಸ್ಥಳವನ್ನ ಅಪವಿತ್ರಗೊಳಿಸಿದ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ.

ಲಕ್ನೋದ ಹಜರತ್​ಗಂಜ್​ ಪೊಲೀಸ್​ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಯುಪಿ ಸಿಎಂ ಯೋಗಿ ಆದಿತ್ಯನಾಥ್​​ರ ಮಾಧ್ಯಮ ಸಲಹೆಗಾರ ಶಲಾಭ್​ ಮಣಿ ತ್ರಿಪಾಠಿ ದೂರಿನ ಪ್ರತಿಯನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಯೋಗಿ ಆದಿತ್ಯನಾಥ್​ರ ಉತ್ತರ ಪ್ರದೇಶದಲ್ಲಿ ಜನರ ಭಾವನೆಯೊಂದಿಗೆ ಆಟವಾಡಲು ಯಾವುದೇ ಅಧಿಕಾರ ಇಲ್ಲ. ಧಾರ್ಮಿಕ ಭಾವನೆಯ ನಡುವೆ ದ್ವೇಷವನ್ನ ಹರಡುತ್ತಿರುವ ಇಡೀ ತಾಂಡವ್​ ತಂಡದ ವಿರುದ್ಧ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಬಂಧನಕ್ಕೆ ಸಿದ್ಧರಾಗಿ ಎಂದು ಟ್ವಿಟರ್​ನಲ್ಲಿ ಶಲಾಭ್​ ಮಣಿ ತ್ರಿಪಾಠಿ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...