alex Certify ರೈತರ ಬೆಂಬಲಕ್ಕೆ ನಿಂತ ನಟಿ ಸ್ವರಾ ಭಾಸ್ಕರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ಬೆಂಬಲಕ್ಕೆ ನಿಂತ ನಟಿ ಸ್ವರಾ ಭಾಸ್ಕರ್‌

ತಿಂಗಳಾನುಗಟ್ಟಲೆ ತಾಳ್ಮೆಯಿಂದ ಪ್ರತಿಭಟಿಸಿದ್ದ ರೈತರು, ಗಣರಾಜ್ಯೋತ್ಸವದಂದು ತಾಳ್ಮೆ ಕಳೆದುಕೊಂಡರು. ಟ್ರ್ಯಾಕ್ಟರ್ ರ್ಯಾಲಿ ಮೂಲಕ ಕೆಂಪುಕೋಟೆಯ ಆವರಣಕ್ಕೆ ನುಗ್ಗಿ ಪೊಲೀಸರ ದೌರ್ಜನ್ಯ ಅನುಭವಿಸಿದರು.

ಅನೇಕರು ರೈತರ ವರ್ತನೆಯನ್ನೇ ಖಂಡಿಸಿದ್ದಾರೆ. ಆದರೆ, ರೈತರ ಬೆಂಬಲಕ್ಕೆ ನಿಂತಿರುವ ಬಾಲಿವುಡ್ ನ ಕೆಲ ನಟ-ನಟಿಯರು, ಪೊಲೀಸರು ಮತ್ತು ಸರ್ಕಾರದ ವರ್ತನೆಯನ್ನು ಖಂಡಿಸಿದ್ದಾರೆ. ರೈತರ ನೋವು, ಮನಸ್ಥಿತಿಯನ್ನು ಅರಿಯಬೇಕು ಎಂದಿದ್ದಾರೆ.

ಸ್ವರಾ ಭಾಸ್ಕರ್ ಅವರು ಹೃದಯ ಛಿದ್ರವಾದ ಎಮೋಜಿ ಪೋಸ್ಟ್ ಮಾಡಿದ್ದರೆ, ಗುಲ್ ಪನಾಗ್, ಅಖಿಲೇಶ್ ಮಿಶ್ರಾ, ಫರಾ ಖಾನ್ ಸೇರಿದಂತೆ ಅನೇಕರು ಪೊಲೀಸರ ವರ್ತನೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕಂಗನಾ ರಣಾವತ್ ಅವರು, ಈ ದೌರ್ಜನ್ಯ, ರಕ್ತದೋಕುಳಿಗಳು ಬೇಸರ ತರಿಸಿವೆ. ದಿಲ್ಲಿ, ಬೆಂಗಳೂರು, ಮತ್ತೀಗ ದಿಲ್ಲಿ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಒಟ್ಟಾರೆ ರೈತರ ಪ್ರತಿಭಟನೆಯ ಪರ ಮತ್ತು ವಿರೋಧಗಳು ವ್ಯಕ್ತವಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...