alex Certify ವಂಚನೆ ಆರೋಪ ಪ್ರಕರಣ: ಉಮಾಪತಿ ವಿರುದ್ಧ ಹೇಳಿಕೆ ನೀಡಿದ ದಚ್ಚು ಮತ್ತೊಬ್ಬ ಆಪ್ತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಂಚನೆ ಆರೋಪ ಪ್ರಕರಣ: ಉಮಾಪತಿ ವಿರುದ್ಧ ಹೇಳಿಕೆ ನೀಡಿದ ದಚ್ಚು ಮತ್ತೊಬ್ಬ ಆಪ್ತ….!

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಯತ್ನ ಆರೋಪ ಇದೀಗ ದಚ್ಚು ಸ್ನೇಹಿತರ ವಿರುದ್ಧವೇ ಬೊಟ್ಟು ಮಾಡಿ ತೋರಿಸುತ್ತಿದೆ. ನಿರ್ಮಾಪಕ ಉಮಾಪತಿ, ಅರುಣಾ ಕುಮಾರಿ ಬಗ್ಗೆ ಒಂದು ರೀತಿಯ ಹೇಳಿಕೆ ನೀಡಿದ್ದರೆ, ಹರ್ಷ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿ ಗೊಂದಲ ಮೂಡಿಸಿದ್ದಾರೆ.  ಈ ಎಲ್ಲದರ ನಡುವೆ ದರ್ಶನ್​ ಮತ್ತೊಬ್ಬ ಆಪ್ತ ರಾಕೇಶ್​ ಶರ್ಮಾ ಉಮಾಪತಿ ವಿರುದ್ಧ ಹೇಳಿಕೆ ನೀಡುವ ಮೂಲಕ ಹರ್ಷ ಪರ ನಿಂತಿದ್ದಾರೆ.

ಈ ಪ್ರಕರಣದ ಹಿಂದೆ ಯಾರದ್ದೋ ಕೈವಾಡ ಇದೆ. ಈ ಘಟನೆಯ ಬಳಿಕ ದರ್ಶನ್​ ತುಂಬಾನೇ ಡಿಸ್ಟರ್ಬ್ ಆಗಿದ್ದಾರೆ ಎಂದು ರಾಕೇಶ್​ ಶರ್ಮಾ ಹೇಳಿದ್ದಾರೆ. ಮಾತ್ರವಲ್ಲದೇ ಅರುಣಾ ಕುಮಾರಿಯನ್ನ ದರ್ಶನ್​ಗೆ ಪರಿಚಯ ಮಾಡಿಸಿದ್ದೇ ಉಮಾಪತಿ ಎಂಬ ಹರ್ಷ ಮೆಲಿಂಡಾ ಹೇಳಿಕೆಗೆ ರಾಕೇಶ್​ ಶರ್ಮಾ ಕೂಡ ದನಿಗೂಡಿಸಿದ್ದಾರೆ.

ಹರ್ಷ ಲೋನ್​​ಗೆ ಅಪ್ಲೈ ಮಾಡಿದ್ದಾರೆ. ಹೀಗಾಗಿ ನಿಮ್ಮ ದಾಖಲೆ ಪರಿಶೀಲನೆಗೆ ಬಂದಿದ್ದಾರೆ ಎಂದು ಉಮಾಪತಿ ದರ್ಶನ್​ಗೆ ಹೇಳಿದ್ದರಂತೆ. ಹಾಗೂ ದರ್ಶನ್​​ಗೆ ಅರುಣಾ ಕುಮಾರಿಯನ್ನ ಸ್ವತಃ ಉಮಾಪತಿಯೇ ಪರಿಚಯ ಮಾಡಿಸಿದ್ದಾರೆ. ಹರ್ಷನ ಲೋನ್​​ಗೆ ನೀವೇ ಶ್ಯೂರಿಟಿ ನೀಡಿದ್ದೀರಿ ಎಂದು ಲೋನ್​ ಬಗ್ಗೆ ದರ್ಶನ್​ ಮುಂದೆ ಸ್ವತಃ ಉಮಾಪತಿ ಪ್ರಸ್ತಾಪ ಮಾಡಿದ್ದಾರೆ.

ಉಮಾಪತಿಯ ಮಾತನ್ನ ನಂಬಿದ್ದ ದರ್ಶನ್,​ ಅರುಣಾ ಕುಮಾರಿಯನ್ನ ಕಳುಹಿಸಿದ್ದರು. ಹಾಗೂ ಹರ್ಷಗೆ ಕರೆ ಮಾಡಿ ಈ ಬಗ್ಗೆ ಸ್ವತಃ ದರ್ಶನ್​ ಮಾಹಿತಿ ನೀಡಿದ್ದರಂತೆ. ಇದರಿಂದ ಅನುಮಾನಗೊಂಡ ರಾಕೇಶ್​ ಹಾಗೂ ಹರ್ಷ ಕೂಡಲೇ ತೋಟಕ್ಕೆ ಆಗಮಿಸಿದ್ದಾರೆ.

ಹರ್ಷ ಅರುಣಾ ಕುಮಾರಿ ಬಳಿ ನಿಮಗೆ ಹರ್ಷ ಎಂದರೆ ಯಾರೆಂದು ಗೊತ್ತಾ ಎಂದು ಕೇಳಿದ್ದಕ್ಕೆ ಅರುಣಾ ಕುಮಾರಿ ಹೌದು ಎಂದು ಉತ್ತರ ನೀಡಿದ್ದಳಂತೆ. ನಾನೇ ಹರ್ಷ ಎಂದು ಹೇಳುತ್ತಿದ್ದಂತೆ ಶಾಕ್​ಗೊಳಗಾದ ಅರುಣಾ ಕುಮಾರಿ ಕೂಡಲೇ ತಮ್ಮ ಕಾರಿನತ್ತ ಓಡಿ ಹೋಗಿದ್ದಳಂತೆ.

ಅರುಣಾ ಕುಮಾರಿಯ ನಡವಳಿಕೆಯಿಂದ ಅನುಮಾನಗೊಂಡು ಕೆನರಾ ಬ್ಯಾಂಕ್​ಗೆ ಕರೆ ಮಾಡಿ ವಿಚಾರಿಸಿದ ವೇಳೆ ಅರುಣಾ ಕುಮಾರಿ ಬ್ಯಾಂಕ್​ ಸಿಬ್ಬಂದಿಯೇ ಅಲ್ಲ ಎಂಬ ವಿಚಾರ ತಿಳಿಯಿತು ಎಂದು ಹರ್ಷ ಹಾಗೂ ರಾಕೇಶ್​ ಹೇಳುತ್ತಿದ್ದಾರೆ.

ಆದರೆ ಈ ಪ್ರಕರಣದಲ್ಲಿ ಉಮಾಪತಿ ಬೇರೆಯದ್ದೇ ಹೇಳಿಕೆ ನೀಡಿದ್ದಾರೆ. ಅರುಣಾ ಕುಮಾರಿಯ ಪತಿ ಹರ್ಷ ಬಳಿಯೇ ಕೆಲಸ ಮಾಡುತ್ತಿದ್ದರು . ಹೀಗಾಗಿ ಹರ್ಷ ಮೂಲಕವೇ ತಮಗೆ ಅರುಣಾ ಕುಮಾರಿ ಪರಿಚಯ ಎಂದು ಹೇಳ್ತಿದ್ದಾರೆ. ಒಟ್ನಲ್ಲಿ ದಚ್ಚು ಸ್ನೇಹಿತರ ಈ ಗೊಂದಲಮಯ ಹೇಳಿಕೆ ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿದೆ. ಮಾತ್ರವಲ್ಲದೇ ದರ್ಶನ್​ ಸ್ನೇಹದ ಲಾಭವನ್ನ ಪಡೆಯಲು ಯತ್ನಿಸಿದ್ದು ಯಾರೆಂಬ ಪ್ರಶ್ನೆ ಮೂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...