alex Certify ‘ಅಕ್ಕಿನೇನಿ’ ಕೈಬಿಟ್ಟ ನಂತರ ವಿಚ್ಛೇದನ ವದಂತಿ ನಡುವೆ ‘ನಾಗ ಮಾವ’ನಿಗೆ ಶುಭ ಹಾರೈಸಿದ ಸಮಂತಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಕ್ಕಿನೇನಿ’ ಕೈಬಿಟ್ಟ ನಂತರ ವಿಚ್ಛೇದನ ವದಂತಿ ನಡುವೆ ‘ನಾಗ ಮಾವ’ನಿಗೆ ಶುಭ ಹಾರೈಸಿದ ಸಮಂತಾ

ಟಾಲಿವುಡ್‌ನ ಜನಪ್ರಿಯ ಜೋಡಿಗಳಲ್ಲಿ ಒಂದಾದ ನಾಗ ಚೈತನ್ಯ ಮತ್ತು ಸಮಂತಾ ಅವರ ವಿಚ್ಛೇದನದ ಬಗ್ಗೆ ಕಳೆದ ಕೆಲವು ದಿನಗಳಿಂದ ವದಂತಿ ಹರಡಿದೆ.

ಇದರಿಂದಾಗಿ ನಾಗ ಚೈತನ್ಯ ಮತ್ತು ಸಮಂತಾ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು. ಸಮಂತಾ ತನ್ನ ಜೀವನಾಂಶವಾಗಿ ದಿಗ್ಭ್ರಮೆಗೊಳಿಸುವ ಮೊತ್ತವನ್ನು ಬೇಡಿಕೆಯಿಟ್ಟಿದ್ದಕ್ಕಾಗಿ ತೀವ್ರ ಟ್ರೋಲಿಗೆ ಒಳಗಾಗಿದ್ದಳು.

ಆದಾಗ್ಯೂ, ನಾಗ ಚೈತನ್ಯ ಮತ್ತು ಸಮಂತಾ ಅಥವಾ ಅವರ ಸ್ನೇಹಿತರು ಕೂಡ ಇದುವರೆಗೆ ವಿಚ್ಛೇದನ ವದಂತಿಗಳಿಗೆ ಪ್ರತಿಕ್ರಿಯಿಸದೇ ಇರುವುದು ಎಲ್ಲರನ್ನೂ ಗೊಂದಲಕ್ಕೀಡು ಮಾಡಿದೆ. ಈ ಸನ್ನಿವೇಶದಲ್ಲಿ, ಸಮಂತಾ ತಮ್ಮ ಮಾವ ಮತ್ತು ಸ್ಟಾರ್ ಹೀರೋ ನಾಗಾರ್ಜುನ ಅವರ ಜನ್ಮದಿನದಂದು ಮಾಡಿದ ಟ್ವೀಟ್ ಅಭಿಮಾನಿಗಳಿಗೆ ದೊಡ್ಡ ನಿಟ್ಟುಸಿರು ಬಿಡುವಂತೆ ಮಾಡಿದೆ.

ಇಂದು ಬೆಳಿಗ್ಗೆ, ಸಮಂತಾ ಟ್ವೀಟ್ ಮಾಡಿ, ನಿಮ್ಮ ಮೇಲಿನ ನನ್ನ ಗೌರವವನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ಇಂದು ಮತ್ತು ಯಾವಾಗಲೂ ನಿಮಗೆ ಆರೋಗ್ಯ ಮತ್ತು ಸಂತೋಷದ ಸಮೃದ್ಧಿಯನ್ನು ನಾನು ಬಯಸುತ್ತೇನೆ. ಮಾವ ಜನ್ಮದಿನದ ಶುಭಾಶಯಗಳು ಎಂದು ನಾಗಾರ್ಜುನ ಅವರಿಗೆ ಶುಭ ಕೋರಿದ್ದಾರೆ.

ಈ ಶುಭಾಶಯ ಅಭಿಮಾನಿಗಳ ಹೃದಯ ಸ್ಪರ್ಶಿಸಿದೆ. ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನದ ಗೊಂದಲದಲ್ಲಿದ್ದ ಅಭಿಮಾನಿಗಳಿಗೆ ಅದೆಲ್ಲ ಕೇವಲ ವದಂತಿ ಎನ್ನುವುದು ಗೊತ್ತಾಗಿದೆ. ಅಂದ ಹಾಗೇ ಸಮಂತಾ ಕೆಲವು ದಿನಗಳ ಹಿಂದೆ ತಮ್ಮ ಹೆಸರಿನ ಜೊತೆಗಿದ್ದ ಅಕ್ಕಿನೇನಿ ಪದ ತೆಗೆದುಹಾಕಿದ್ದರಿಂದ ವಿಚ್ಛೇದನ ವದಂತಿ ಹರಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...