alex Certify ಮ್ಯಾನ್ ಹೋಲ್ ಗೆ ಬಿದ್ದು ಖ್ಯಾತ ಗಾಯಕ ಅಜಯ್ ವಾರಿಯರ್ ಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮ್ಯಾನ್ ಹೋಲ್ ಗೆ ಬಿದ್ದು ಖ್ಯಾತ ಗಾಯಕ ಅಜಯ್ ವಾರಿಯರ್ ಗೆ ಗಾಯ

ಬೆಂಗಳೂರು: ಭಾರಿ ಮಳೆಯಿಂದಾಗಿ ರಸ್ತೆ, ಫುಟ್ ಪಾತ್ ಮೇಲೆ ನೀರು ಹರಿದ ಪರಿಣಾಮ ಮ್ಯಾನ್ ಹೋಲ್ ಕಾಣದೆ ಖ್ಯಾತ ಗಾಯಕ ಅಜಯ್ ವಾರಿಯರ್ ಬಿದ್ದು ಗಾಯಗೊಂಡ ಘಟನೆ ನಡೆದಿದೆ.

ಮೇ 8 ರಂದು ಕೇರಳಕ್ಕೆ ಹೋಗಲು ರೈಲ್ವೆ ನಿಲ್ದಾಣಕ್ಕೆ ಹೋಗಬೇಕಿದ್ದ ಅಜಯ್ ವಾರಿಯರ್ ಅವರು ಮೆಟ್ರೋ ನಿಲ್ದಾಣ ಸಮೀಪಿಸುತ್ತಿದ್ದಂತೆ ಮುಖ್ಯ ರಸ್ತೆಯಲ್ಲಿ ನೀರು ನಿಂತಿದ್ದ ಕಾರಣ ಫುಟ್ ಪಾತ್ ಮೇಲೆ ಹೆಜ್ಜೆ ಹಾಕಿದ್ದಾರೆ. ಮ್ಯಾನ್ ಹೋಲ್ ಕಾಣದೆ ಅದರೊಳಗೆ ಕಾಲಿಟ್ಟಿದ್ದು, ಚರಂಡಿಯೊಳಗೆ ಬಿದ್ದಿದ್ದಾರೆ. ಎದೆ ಮಟ್ಟದವರೆಗೂ ನೀರು ಇತ್ತು. ಆದರೆ, ಕೈಯಲ್ಲಿ ಹಿಡಿದಿದ್ದ ಸೂಟ್ ಕೇಸ್ ನಿಂದ ಅದೃಷ್ಟವಶಾತ್ ಅವರು ಪಾರಾಗಿದ್ದಾರೆ.

ಮ್ಯಾನ್ ಹೋಲ್ ಮುಚ್ಚುವ ಸಿಮೆಂಟ್ ಪ್ಲೇಟ್ ಬದಲಾಯಿಸುವ ಬಗ್ಗೆ ಬಿಬಿಎಂಪಿ ತಲೆಕೆಡಿಸಿಕೊಳ್ಳದ ಕಾರಣ ಅವಘಡ ಸಂಭವಿಸಿದೆ. ಮಕ್ಕಳು ಅದರೊಳಗೆ ಬಿದ್ದಿದ್ದರೆ ದೊಡ್ಡ ಅನಾಹುತ ನಡೆಯುವ ಸಾಧ್ಯತೆ ಇತ್ತು. ಬಿಬಿಎಂಪಿ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಸುರಕ್ಷಿತ ರಸ್ತೆ, ಫುಟ್ಪಾತ್ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅಜಯ್ ವಾರಿಯರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...