alex Certify ಕಠಿಣ ವ್ರತಾಚರಣೆಯೊಂದಿಗೆ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಖ್ಯಾತ ನಟ ಅಜಯ್ ದೇವಗನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಠಿಣ ವ್ರತಾಚರಣೆಯೊಂದಿಗೆ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಖ್ಯಾತ ನಟ ಅಜಯ್ ದೇವಗನ್

ತಿರುವನಂತಪುರಂ: ಖ್ಯಾತ ನಟ ಅಜಯ್ ದೇವಗನ್ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ತೀರ್ಥಯಾತ್ರೆಯ ಪೂರ್ವ ಆಚರಣೆಗಳನ್ನು ಕೂಡ ಕಟ್ಟುನಿಟ್ಟಾಗಿ ಅನುಸರಿಸಿದ್ದಾರೆ.

ಲೋಕೇಶ್ ಕನಕರಾಜ್ ಅಭಿನಯದ ತಮಿಳು ಚಿತ್ರ ‘ಕೈತಿ’ ಹಿಂದಿ ರಿಮೇಕ್ ಅಧಿಕೃತವಾಗಿ ಘೋಷಿಸಿದ ನಂತರ, ಅಜಯ್ ದೇವಗನ್ ಅಯ್ಯಪ್ಪ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಲು ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

ಅವರ ಯಾತ್ರೆಯ ಹಲವು ವಿಡಿಯೋಗಳು ಮತ್ತು ಫೋಟೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಅಜಯ್ ದೇವಗನ್ ಕಪ್ಪು ವಸ್ತ್ರಧಾರಿಯಾಗಿ ಮಾಲೆ ಧರಿಸಿರುವುದನ್ನು ಕಾಣಬಹುದು.

ಅಜಯ್ ಅವರು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ಒಂದು ತಿಂಗಳ ಪೂರ್ವದಲ್ಲಿ ತೀರ್ಥಯಾತ್ರೆಯ ಆಚರಣೆಗಳನ್ನು ಅನುಸರಿಸಿದ್ದಾರೆ. ನೆಲದ ಮೇಲೆ ಮಲಗುವುದರಿಂದ ಹಿಡಿದು ಸಸ್ಯಾಹಾರ ಸೇವಿಸುವುದು, ಬರಿಗಾಲಿನಲ್ಲಿ ನಡೆಯುವುದು, ಮದ್ಯಪಾನದಿಂದ ದೂರವಿರುವುದು ಸೇರಿದಂತೆ ಮಾಲಾಧಾರಿಯಾಗಿ ವ್ರತ ಪಾಲಿಸಿದ್ದಾರೆ.

ಕೇರಳದ ಪತ್ತನಂತಿಟ್ಟ ಜಿಲ್ಲೆಯ ಬೆಟ್ಟಗಳ ಮೇಲೆ ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿ ಅಯ್ಯಪ್ಪಸ್ವಾಮಿ ದೇವಾಲಯವಿದೆ. ವಿಶೇಷ ಸಂಕ್ರಾಂತಿಯಂದು ಲಕ್ಷಾಂತರ ಭಕ್ತರು ಭೇಟಿ ನೀಡಿ ಮಕರ ಜ್ಯೋತಿ ದರ್ಶನ ಪಡೆಯುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...