alex Certify ಸುದೀಪ್​ ಮಾತಿಗೂ ಬೆಲೆ ಕೊಡಲಿಲ್ಲ ನಟಿ ಜಯಶ್ರೀ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುದೀಪ್​ ಮಾತಿಗೂ ಬೆಲೆ ಕೊಡಲಿಲ್ಲ ನಟಿ ಜಯಶ್ರೀ..!

ಕನ್ನಡ ಬಿಗ್​ಬಾಸ್​ 3ರ ಸ್ಪರ್ಧಿ ನಟಿ ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾಗಡಿ ರಸ್ತೆಯಲ್ಲಿರುವ ಗೊಲ್ಲರಹಟ್ಟಿಯಲ್ಲಿರುವ ಪ್ರಗತಿ ಬಡಾವಣೆಯಲ್ಲಿರುವ ಸಂಧ್ಯಾ ಕಿರಣ ವೃದ್ಧಾಶ್ರಮದಲ್ಲಿ ನಟಿ ಜಯಶ್ರೀ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ರೂಪದರ್ಶಿಯಾಗಿದ್ದ ಜಯಶ್ರೀ ಬಿಗ್​ ಬಾಸ್​ ಕನ್ನಡ ಸೀಸನ್​ 3ರಲ್ಲಿ ಸ್ಪರ್ಧಿಯಾಗಿ ಬರುವ ಮೂಲಕ ಖ್ಯಾತಿ ಪಡೆದಿದ್ದರು. ಈ ನಟಿ ಉಪ್ಪು ಹುಳಿ ಖಾರ, ಕನ್ನಡ್ ಗೊತ್ತಿಲ್ಲ ಸೇರಿದಂತೆ ಬೆರಳಣಿಕೆಯಷ್ಟು ಸಿನಿಮಾದಲ್ಲಿ ನಟಿಸಿದ್ದರು.

ಅಂದಹಾಗೆ ನಟಿ ಜಯಶ್ರೀ ಆತ್ಮಹತ್ಯೆಗೆ ಯತ್ನಿಸಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಅನೇಕ ಬಾರಿ ಜಯಶ್ರೀ ಆತ್ಮಹತ್ಯೆಗೆ ಯತ್ನ ಮಾಡಿದ್ದರು. ಆಸ್ತಿ ಕಲಹ, ದೌರ್ಜನ್ಯಗಳಿಂದ ಬೇಸತ್ತಿದ್ದ ನಟಿ ಈ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಸೂಚನೆ ನೀಡಿದ್ದರು. ನನಗೆ ಜೀವನವೇ ಸಾಕಾಗಿದೆ ಎಂದು ಹೇಳಿಕೊಂಡಿದ್ದರು. ಇದಾದ ಬಳಿಕ ತಾವೇ ನಾನು ಸುರಕ್ಷಿತವಾಗಿದ್ದೇನೆಂದು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
 ಬಳಿಕ ಜಯಶ್ರೀಗೆ ಖುದ್ದು ನಟ ಸುದೀಪ್​ ಸಾಂತ್ವಾನದ ಮಾತುಗಳನ್ನ ಆಡಿದ್ದರು. ಜೀವನದಲ್ಲಿ ಬರುವ ಕಷ್ಟ, ಸವಾಲುಗಳನ್ನ ಎದುರಿಸೋಕೆ ಕಲಿತುಕೊಳ್ಳಿ . ನಿಮ್ಮ ಜೀವನವನ್ನ ನೀವು ಪ್ರೀತಿಸೋದನ್ನ ಕಲಿತುಕೊಳ್ಳಿ ಎಂದು ಬುದ್ಧಿವಾದದ ಮಾತುಗಳನ್ನಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...