alex Certify ಸಲ್ಮಾನ್ ಕುಟುಂಬ ಸದಸ್ಯರ ಕುರಿತ ಶಾಕಿಂಗ್ ಸಂಗತಿ ಬಹಿರಂಗ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲ್ಮಾನ್ ಕುಟುಂಬ ಸದಸ್ಯರ ಕುರಿತ ಶಾಕಿಂಗ್ ಸಂಗತಿ ಬಹಿರಂಗ…!

ಮುಂಬೈ: ಈಚೆಗಷ್ಟೇ ಆತ್ಮಹತ್ಯೆ ಮಾಡಿಕೊಂಡ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಬಾಲಿವುಡ್ ನಿರ್ದೇಶಕ ಅಭಿನವ್ ಕಶ್ಯಪ್ ಆಗ್ರಹ ಮಾಡಿದ್ದಾರೆ. ಇದಕ್ಕೆ ಅವರು ನೀಡುವ ಕಾರಣ ಸಲ್ಮಾನ್ ಖಾನ್ ಹಾಗೂ ಮತ್ತವರ ಕುಟುಂಬದಿಂದ ದೌರ್ಜನ್ಯ ಮತ್ತು ಬೆದರಿಕೆ ಎಂದು ಹೇಳಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರು ದಬಾಂಗ್ ನಂತರ 10 ಹತ್ತು ವರ್ಷದ ನನ್ನ ವೃತ್ತಿ ಜೀವನವನ್ನು ತುಂಬಾ ನರಕಮಯವಾಗಿ ಮಾಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ನಾನು ದಬಾಂಗ್ 2 ಚಿತ್ರದಿಂದ ಹೊರಬಂದೆ. ಏಕೆಂದರೆ ಅರ್ಬಾಜ್ ತನ್ನ ಹಾಗೂ ತನ್ನ ಕುಟುಂಬದಿಂದ ನನ್ನನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಮುಂದಾಯಿತು ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ನಾನು ನಿರ್ದೇಶನ ಮಾಡಿದ ಬೇಷರಮ್ ಸಿನಿಮಾವನ್ನು ಪ್ರದರ್ಶನ ಮಾಡಲು ತುಂಬಾ ಕಾಟ ಕೊಟ್ಟಿದ್ದಾರೆ. ನಾನು ರಿಲಯನ್ಸ್ ಎಂಟರ್ಟೈನ್ಮೆಂಟ್ ಜೊತೆ ಈ ಸಿನಿಮಾ ಮಾಡಿದ್ದರಿಂದ ಕೊನೆಗೂ ಸಿನಿಮಾವನ್ನು ಬಿಡುಗಡೆ ಮಾಡಲು ಆಯಿತು. ಅಲ್ಲದೆ ಈ ಸಿನಿಮಾ ಬಗ್ಗೆ ನಕಾರಾತ್ಮಕ ಕಮೆಂಟ್ ಮಾಡಿದ್ದಲ್ಲದೆ ಹೆಚ್ಚು ಟ್ರೋಲ್ ಮಾಡಿದ್ದರು. ಹೀಗಾಗಿ ಸಿನಿಮಾ ಸೋಲಬೇಕಾಯಿತು ಎಂದೂ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...