alex Certify ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಪ್ರಕರಣ: ಕಿಡಿಗೇಡಿಗಳಿಗೆ ಕಿಚ್ಚ ಸುದೀಪ್ ಖಡಕ್ ಎಚ್ಚರಿಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಪ್ರಕರಣ: ಕಿಡಿಗೇಡಿಗಳಿಗೆ ಕಿಚ್ಚ ಸುದೀಪ್ ಖಡಕ್ ಎಚ್ಚರಿಕೆ…!

ಬೆಂಗಳೂರು: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂಸಗೊಳಿಸಿರುವ ಕಿಡಿಗೇಡಿಗಳ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ಈ ನಡುವೆ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಕಿಡಿಗೇಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಈ ಕುರಿತು ವಿಡಿಯೋ ಶೇರ‍್ ಮಾಡಿರುವ ಕಿಚ್ಚ ಸುದೀಪ್, ವಿಷ್ಣು ಸರ್ ಅವರ ಪ್ರತಿಮೆ ಧ್ವಂಸಗೊಳಿಸಿರುವ ಬಗ್ಗೆ ಈಗ ಗೊತ್ತಾಯಿತು. ಪ್ರತಿಮೆ ಒಡೆದು ಹಾಕಿದ ಮಹಾನುಭಾವರಿಗೆ ಒಂದು ವಿಷಯ ಹೇಳುತ್ತೆನೆ. ಯಾರು ಈ ಕೃತ್ಯವೆಸಗಿದ್ದಾರೋ ದಯವಿಟ್ಟು ಸಿಕ್ಕಿಹಾಕಿಕೊಳ್ಳಬೇಡಿ. ಒಂದು ವೇಳೆ ಸಿಕ್ಕಿ ಹಾಕಿಕೊಂಡರೆ ವಿಷ್ಣು ಅಭಿಮಾನಿಗಳು ನೀವು ಪ್ರತಿಮೆ ಧ್ವಂಸಗೊಳಿಸಿದ್ದಕ್ಕಿಂತ ಹೀನಾಯವಾಗಿ ನಿಮ್ಮನ್ನು ಹೊಡೆದು ಹಾಕುತ್ತಾರೆ.

ಮೂರ್ತಿಯನ್ನು ಒಡೆದು ಹಾಕುವ ಮುನ್ನ ಒಮ್ಮೆ ಯೋಚಿಸಬೇಕಿತ್ತು….ಓರ್ವ ಮನುಷ್ಯನಾಗಿ ಮಾಡುವ ಕೆಲಸವೇ ಅಲ್ಲ. ಈ ಕೃತ್ಯ ಮಾಡಿದವರು ಯಾರು, ನಿಮ್ಮ ಹೆಸರು ಗೊತ್ತಾಗುವ ಮುನ್ನ ಈ ದೇಶವನ್ನೇ ಬಿಟ್ಟು ಓಡಿಹೋಗಿ. ಯಾಕೆಂದರೆ ನಿಮ್ಮ ಹೆಸರು ಗೊತ್ತಾದ ದಿನ ಏನು ನಡೆಯತ್ತೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...