alex Certify ಬೇಸಾಯಕ್ಕೆ ಇಳಿದ ಬಿಗ್ ‌ಬಾಸ್ ಸ್ಪರ್ಧಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಾಯಕ್ಕೆ ಇಳಿದ ಬಿಗ್ ‌ಬಾಸ್ ಸ್ಪರ್ಧಿ..!

ಬಿಗ್ ಬಾಸ್ ಕನ್ನಡ ಸೀಸನ್ 7 ಕಾರ್ಯಕ್ರಮದಲ್ಲಿ ಭಾಗವಹಿಸಿ, ಫಿನಾಲೆ ತಲುಪಿದ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಭೂಮಿ ಶೆಟ್ಟಿ ಲಾಕ್‌ ಡೌನ್ ಸಮಯದಲ್ಲಿ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಇದ್ದೇ ಇದೆ. ಇದಕ್ಕೆ ಉತ್ತರ ಎನ್ನುವಂತೆ ಅವರ ಇತ್ತೀಚಿನ ಒಂದಿಷ್ಟು ಫೋಟೋಗಳು ವೈರಲ್ ಆಗಿವೆ.

ಹೌದು, ಕಿರುತೆರೆ ನಟಿ ಭೂಮಿ ಶೆಟ್ಟಿ ಬೆಂಗಳೂರಿನಿಂದ ತಮ್ಮ ಊರಿಗೆ ಹೋಗಿ ಅಲ್ಲಿ ಸಮಯ ಕಳೆಯುತ್ತಿದ್ದಾರೆ. ಉಡುಪಿಯ ಬೈಂದೂರು ತಾಲೂಕಿನ ಬೀಜೂರು ಗ್ರಾಮದಲ್ಲಿ ಈ ನಟಿ ಹೊಲ ಗದ್ದೆ ಕೆಲಸ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಹಳ್ಳಿಗಳಲ್ಲಿ ಗದ್ದೆ ಕೆಲಸ ಆರಂಭವಾಗಿದೆ. ಈ ವೇಳೆ ಭೂಮಿ, ಗದ್ದೆಗೆ ಗೊಬ್ಬರ ಹಾಕುವ ಮೂಲಕ ನಾನು ಅಪ್ಪಟ ಕೃಷಿಕಳು ಎಂದು ತೋರ್ಪಡಿಸಿದ್ದಾರೆ.

ನಮ್ಮ ಮನೆಯವರ ಜೊತೆ ಸೇರಿ ಹಳ್ಳಿಯಲ್ಲಿ ಗದ್ದೆ ಕೆಲಸ ಮಾಡಿದ್ದೇನೆ. ಇದು ತುಂಬಾ ಖುಷಿ ಸಿಕ್ಕಿದೆ. ಸಮಯ ಇದ್ದಿದ್ದರಿಂದ ಕುಟುಂಬಸ್ಥರ ಜೊತೆ ಸೇರಿ ಕೆಲಸ ಮಾಡಿದ್ದೇನೆ. ನಾನು ಮತ್ತು ನನ್ನ ಸಹೋದರ ಸೇರಿ ಗದ್ದೆಗೆ ಗೊಬ್ಬರ ಹಾಕಿದೆವು. ಆಮೇಲೆ ಕೆಲಸಗಾರರು ನಾಟಿ ಮಾಡಿದ್ದಾರೆ. ಪ್ರಕೃತಿ ಏನು ಎಂಬುದು ನನಗೆ ಈಗ ಅರ್ಥವಾಗಿದೆ. ರೈತರ ಮೇಲಿನ ಗೌರವ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲ ಒಂದಿಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...