alex Certify ಬೇರೆಯಾಗಿಲ್ಲ ಐಶ್ವರ್ಯಾ –ಧನುಷ್; ಮಹತ್ವದ ಮಾಹಿತಿ ನೀಡಿದ ಧನುಷ್ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇರೆಯಾಗಿಲ್ಲ ಐಶ್ವರ್ಯಾ –ಧನುಷ್; ಮಹತ್ವದ ಮಾಹಿತಿ ನೀಡಿದ ಧನುಷ್ ತಂದೆ

ತಮಿಳು ನಟ ಧನುಷ್​ ಹಾಗೂ ರಜನಿಕಾಂತ್​ ಪುತ್ರಿ ಐಶ್ವರ್ಯಾ ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ ಹಾಡಿರುವ ಸುದ್ದಿ ಅಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡಿದೆ. ಈ ದಂಪತಿ ತಾವು ಬೇರ್ಪಟ್ಟ ವಿಚಾರವನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿರುವ ಬೆನ್ನಲ್ಲೇ ಇದೀಗ ಧನುಷ್​ ಹಾಗೂ ಐಶ್ವರ್ಯಾ ನಡುವೆ ವಿಚ್ಚೇಧನವಾಗಿಲ್ಲ. ಬದಲಾಗಿ ಇದೊಂದು ಕೌಟುಂಬಿಕ ಕಲಹ ಎಂಬ ಸುದ್ದಿಗಳು ಕೇಳಿ ಬರುತ್ತಿವೆ.

ಈ ಸಂಬಂಧ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ ಧನುಷ್ ತಂದೆ ಹಾಗೂ ನಿರ್ಮಾಪಕ ಕಸ್ತೂರಿ ರಾಜಾ ತಮ್ಮ ಪುತ್ರ ಹಾಗೂ ಸೊಸೆಯ ವಿಚ್ಚೇದನದ ವಿಚಾರವನ್ನು ತಳ್ಳಿ ಹಾಕಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಕಸ್ತೂರಿ ರಾಜಾ ಅವರು, ಧನುಷ್​ ಹಾಗೂ ಐಶ್ವರ್ಯಾ ಕೆಲವು ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಬೇರ್ಪಟ್ಟಿದ್ದಾರೆ. ಇದು ಸಾಮಾನ್ಯವಾಗಿ ದಂಪತಿಯ ನಡುವೆ ಇರುವ ಕೌಟುಂಬಿಕ ಕಲಹವಾಗಿದೆ. ಪ್ರಸ್ತುತ ಈ ದಂಪತಿ ಚೆನ್ನೈನಲ್ಲಿಲ್ಲ . ಹೈದರಾಬಾದ್​ನಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

ತಮ್ಮ 18 ವರ್ಷಗಳ ಸುದೀರ್ಘ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ ನಟ ಧನುಷ್​ ಹಾಗೂ ಸೂಪರ್​ ಸ್ಟಾರ್​ ರಜನಿಕಾಂತ್​ ಪುತ್ರಿ ನಿರ್ದೇಶಕಿ ಐಶ್ವರ್ಯಾ ಈ ವಾರದ ಆರಂಭದಲ್ಲಿ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳ ಮೂಲಕ ಮಾಹಿತಿ ಬಹಿರಂಗಪಡಿಸಿದ್ದರು. ಅತರಂಗಿ ರೇ ಸಿನಿಮಾದಲ್ಲಿ ಸಾರಾ ಅಲಿ ಖಾನ್​ ಜೊತೆ ಕಾಣಿಸಿಕೊಂಡಿರುವ ನಟ ಧನುಷ್​ ಟ್ವಿಟರ್​ನಲ್ಲಿ ಈ ಪತ್ರವನ್ನು ಪೋಸ್ಟ್​ ಮಾಡಿದ್ದರೆ ಐಶ್ವರ್ಯಾ ಇನ್​ಸ್ಟಾಗ್ರಾಂ ಪೋಸ್ಟ್​ ಮೂಲಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...