alex Certify ಬಹಿರಂಗವಾಯ್ತು ʼಚೆನ್ನೈ ಎಕ್ಸ್‌ಪ್ರೆಸ್ʼ‌ನಲ್ಲಿ ನಟಿ ನಯನತಾರ ನಟಿಸದೇ ಇರುವ ಹಿಂದಿನ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹಿರಂಗವಾಯ್ತು ʼಚೆನ್ನೈ ಎಕ್ಸ್‌ಪ್ರೆಸ್ʼ‌ನಲ್ಲಿ ನಟಿ ನಯನತಾರ ನಟಿಸದೇ ಇರುವ ಹಿಂದಿನ ಕಾರಣ

ಸಿನಿಮಾ ರಂಗದಲ್ಲಿ ಅನೇಕ ಸ್ಟಾರ್ ನಟಿಯರಿಗೆ ಒಳ್ಳೊಳ್ಳೆ ಆಫರ್ ಬಂದರೂ ಅದನ್ನು ರಿಜೆಕ್ಟ್ ಮಾಡೋದನ್ನು ನೋಡಿದ್ದೇವೆ. ಅದಕ್ಕೆ ಕಾರಣಗಳು ಕೂಡ ಅನೇಕ ಇರುತ್ತವೆ. ಆದರೆ ಕೆಲವೊಮ್ಮೆ ಆ ಕಾರಣಗಳು ಹೊರ ಬಂದಾಗ ಸತ್ಯಾಂಶಗಳು ತಿಳಿಯುತ್ತವೆ. ಅದೇ ರೀತಿ ಶಾರುಖ್ ಸಿನಿಮಾದಲ್ಲಿ ನಟಿಸಲು ಚಾನ್ಸ್ ಸಿಕ್ಕರೆ ಸಾಕು ಅಂತಾ ಕಾಯುತ್ತಾರೆ ಅನೇಕ ಮಂದಿ ನಟಿಯರು. ಆದರೆ ನಯನತಾರಾಗೆ ಅವಕಾಶ ಸಿಕ್ಕರೂ ಅವರು ಅದನ್ನು ರಿಜೆಕ್ಟ್ ಮಾಡಿದ್ದರು.

ರಿಜೆಕ್ಟ್ ಮಾಡೋದಿಕ್ಕೂ ಕಾರಣ ಇದೆ. ಈ ಸಿನಿಮಾದಲ್ಲಿ ವಿಶೇಷ ಹಾಡೊಂದಕ್ಕೆ ನಯನತಾರ ನೃತ್ಯ ಮಾಡಬೇಕಿತ್ತು. ಈ ಹಾಡಿನ ನೃತ್ಯ ಸಂಯೋಜನೆಯನ್ನು ಪ್ರಭುದೇವ್ ಮಾಡಿದ್ದರಂತೆ. ಹೀಗಾಗಿಯೇ ಆ ಸಾಂಗ್‌ಗೆ ಹೆಜ್ಜೆ ಹಾಕಲು ನಯನತಾರ ಹಿಂದೇಟು ಹಾಕಿ ರಿಜೆಕ್ಟ್ ಮಾಡಿದ್ದರಂತೆ. ನಂತರ ಈ ಹಾಡಿಗೆ ಪ್ರಿಯಾಮಣಿ ಸ್ಟೆಪ್ ಹಾಕಿದ್ದರು.

ನಯನತಾರ ಹಾಗೂ ಪ್ರಭುದೇವ್ ಪ್ರೀತಿಸಿದ್ದರು. ಮದುವೆಯ ಹಂತಕ್ಕೂ ಈ ವಿಚಾರ ಬಂದಿತ್ತು. ಆದರೆ ಕೆಲವೊಂದು ಕಾರಣಗಳಿಂದ ಇವರ ಸಂಬಂಧ ಬ್ರೇಕ್ ಅಪ್ ಆಯ್ತು. ಇದಾದ ನಂತರ ಈ ಇಬ್ಬರು ಎಲ್ಲಿಯೂ ಒಟ್ಟಾಗಿ ಕಾಣಿಸಿಲ್ಲ, ಒಟ್ಟಾಗಿ ಕೆಲಸ ಮಾಡಿಲ್ಲ. ಹೀಗಾಗಿಯೇ ಈ ಸಿನಿಮಾವನ್ನೂ ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...