alex Certify ಪ್ರಾಣ ಹೋದರೂ ಮಾತು ತಪ್ಪಲ್ಲ ಎಂದ ಕಂಗನಾ: ಪ್ರಶಸ್ತಿಗಳನ್ನು ವಾಪಸ್ ನೀಡ್ತಾರಾ ಬಾಲಿವುಡ್ ಬೆಡಗಿ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಣ ಹೋದರೂ ಮಾತು ತಪ್ಪಲ್ಲ ಎಂದ ಕಂಗನಾ: ಪ್ರಶಸ್ತಿಗಳನ್ನು ವಾಪಸ್ ನೀಡ್ತಾರಾ ಬಾಲಿವುಡ್ ಬೆಡಗಿ…?

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರದ್ದು, ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದ ನಟಿ ಕಂಗನಾ ರಣಾವತ್ ಅವರಿಗೆ ಪ್ರಶಸ್ತಿಗಳನ್ನು ಸರ್ಕಾರಕ್ಕೆ ವಾಪಸ್ ನೀಡುವಂತೆ ಹಲವರು ಒತಾಯಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಕಂಗನಾ, ತಾನು ಕೊಟ್ಟ ಮಾತನ್ನು ಪ್ರಾಣ ಹೋದರೂ ತಪ್ಪುವುದಿಲ್ಲ. ನಾನು ರಾಮನ ಭಕ್ತೆ ಎಂದು ಹೇಳಿದ್ದಾರೆ.

ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆ ಹೊರತು ಕೊಲೆಯಲ್ಲ ಎಂದು ಏಮ್ಸ್ ವೈದ್ಯರು ಹಾಗೂ ಸಿಬಿಐ ಅಧಿಕಾರಿಗಳು ಸ್ಪಷ್ಟ ಪಡಿಸಿರುವ ಬೆನ್ನಲ್ಲೇ ಕಂಗನಾ ವಿರುದ್ಧ ಕಿಡಿಕಾರಿದ್ದ ಸ್ವರಾ ಭಾಸ್ಕರ್, ಪ್ರಶಸ್ತಿಗಳನ್ನು ಸರ್ಕಾರಕ್ಕೆ ವಾಪಸ್ ನೀಡುವಂತೆ ಆಗ್ರಹಿಸಿದ್ದರು. ಅಲ್ಲದೇ ಹಲವರು ಕಂಗನಾ ಅವರಿಗೆ ಅವಾರ್ಡ್ ರಿಟರ್ನ್ ಮಾಡುವಂತೆ ಟ್ವಿಟರ್ ನಲ್ಲಿ ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ತನ್ನ ಸಂದರ್ಶನದ ಹೇಳಿಕೆಯ ವಿಡಿಯೋವನ್ನು ಅಪ್ ಲೋಡ್ ಮಾಡಿ, ನಾನು ಮಾಡಿರುವ ಆರೋಪದಲ್ಲಿ ಸುಳ್ಳಿದ್ದರೆ ನನ್ನ ಎಲ್ಲಾ ಪ್ರಶಸ್ತಿಗಳನ್ನು ವಾಪಸ್ ನೀಡುತ್ತೇನೆ. ಇದು ಕ್ಷತ್ರಿಯಳ ಮಾತು. ನಾನು ರಾಮನ ಭಕ್ತೆ. ಪ್ರಾಣ ಹೋದರೂ ಮಾತು ತಪ್ಪಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...