alex Certify ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರೀಕ್ಷೆಯಲ್ಲಿದೆ ಈ ʼಬಸವʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರೀಕ್ಷೆಯಲ್ಲಿದೆ ಈ ʼಬಸವʼ

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಟಿ ಸುಮಲತಾ ಸ್ಪರ್ಧಿಸಿ ಗೆಲುವು ಸಾಧಿಸಿದರು.

ಈ ವೇಳೆ ಭರ್ಜರಿ ಪ್ರಚಾರ ಕೈಗೊಂಡಿದ್ದ ನಟ ದರ್ಶನ್, ಸುಮಲತ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಂಡ್ಯದ ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ ಮತಯಾಚನೆ ಮಾಡಿದರು. ಈ ವೇಳೆ ನಟ ದರ್ಶನ್ ಬಸವನ ಮಾತನಾಡಿಸಿದ್ದ ಪರಿ ಸಾಕಷ್ಟು ವೈರಲ್ ಆಗಿತ್ತು.

ಇದೀಗ ಆ ಬಸವ ದರ್ಶನ್ ಗಾಗಿ ಕಾದು ಕುಳಿತಿದೆ. ಹೌದು, ಕೆ.ಆರ್. ನಗರದ ಕಾಳಮ್ಮಕೊಪ್ಪಲು ಊರಿನ ಬಸವ ಕಾಲು ಮುರಿದುಕೊಂಡಿದೆ. ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳುತ್ತಿಲ್ಲವಂತೆ. ಅದರ ನರಳಾಟ ನೋಡದೇ ಜನ ಕಣ್ಣೀರು ಹಾಕುತ್ತಿದ್ದಾರೆ ಎನ್ನಲಾಗಿದೆ.

ಹೀಗಾಗಿ ದರ್ಶನ್ ಬಂದರೆ ಬಸವನ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣಬಹುದು ಅಂತ ಅಲ್ಲಿನ ಜನ ಹೇಳುತ್ತಿದ್ದಾರೆ. ಏಕೆಂದರೆ ಪ್ರಚಾರದ ಸಮಯದಲ್ಲಿ ಬಸವ, ದರ್ಶನ್ ಮಾತು ಕೇಳಿ ದಾರಿ ಬಿಟ್ಟಿತ್ತು. ಹಾಗಾಗಿ ಅವರು ಬಂದು ಇದನ್ನು ಮಾತನಾಡಿಸಿದರೆ ಚೇತರಿಕೆ ಕಾಣಬಹುದು ಎಂಬ ಆಲೋಚನೆ ಅವರದ್ದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...