alex Certify ಈ ಕಾರಣಕ್ಕೆ ಮಾತೃತ್ವವನ್ನೇ ತ್ಯಜಿಸಲು ಮುಂದಾದ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಮಾತೃತ್ವವನ್ನೇ ತ್ಯಜಿಸಲು ಮುಂದಾದ ನಟಿ

ಪ್ರತಿ ಹೆಣ್ಣು ತಾನು ತಾಯಿಯಾಗಬೇಕು, ತಾಯ್ತನದ ಸುಖವನ್ನು ಅನುಭವಿಸಬೇಕು ಎಂದು ಇಚ್ಚಿಸುತ್ತಾಳೆ. ಆದರೆ ಸ್ಯಾಂಡಲ್ ವುಡ್ ನಟಿ ಪಾರುಲ್ ಯಾದವ್ ನಾನು ನನ್ನ ಮಾತೃತ್ವವನ್ನೇ ತ್ಯಜಿಸುತ್ತಿದ್ದೇನೆ. ನಾನು ತಾಯಿಯಾಗಲು ಇಚ್ಚಿಸುವುದಿಲ್ಲ ಎಂದು ಹೇಳಿದ್ದಾರೆ.

ಪಾರುಲ್ ಯಾದವ್ ಅವರ ಈ ನಿರ್ಧಾರಕ್ಕೆ ಕಾರಣ ಹತ್ರಾಸ್ ಗ್ಯಾಂಗ್ ರೇಪ್ ಹಾಗೂ ಹತ್ಯೆ ಪ್ರಕರಣ. ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿ, ಕ್ರೂರವಾಗಿ ಹಿಂಸಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಯುವತಿಯನ್ನು ಪೋಷಕರಿಗೂ ಒಪ್ಪಿಸದೆ ಪೊಲೀಸರೇ ರಾತ್ರೋರಾತ್ರಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಈ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಹತ್ರಾಸ್ ಘಟನೆಯಿಂದ ತೀವ್ರವಾಗಿ ನೊಂದಿರುವ ನಟಿ ಪಾರುಲ್ ಕಠಿಣ ನಿರ್ಧಾರಕ್ಕೆ ಬಂದಿದ್ದು, ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.

ತಾಯಿಯಾಗುವುದು ಸ್ತ್ರೀತ್ವದ ಸಾರಾಂಶ. ಆದರೆ ಇಂದು ನಾನು ತಾಯಿಯಾಗಲು ಬಯಸುವುದಿಲ್ಲ. ಓರ್ವ ಹೆಣ್ಣಾಗಿ ಈ ನಿರ್ಧಾರ ಕೈಗೊಳ್ಳುವುದು ಕಷ್ಟದ ವಿಷಯ. ಆದರೂ ನಾನು ನನ್ನ ಮಾತೃತ್ವವನ್ನು ತ್ಯಜಿಸುತ್ತಿದ್ದೇನೆ. ಯಾಕೆಂದರೆ ಒಂದು ವೇಳೆ ನಾನು ತಾಯಿಯಾದರೆ ನನಗೆ ಹೆಣ್ಣು ಮಗುವಾದರೆ ಗತಿಯೇನು? ಈ ದೇಶ ಮಹಿಳೆಯರಿಗೆ ಕ್ರೂರವಾಗಿದೆ. ಇದಕ್ಕೆ ಇತ್ತೀಚೆಗೆ ಹತ್ರಾಸ್ ನಲ್ಲಿ ನಡೆದ ಘಟನೆಯೇ ಉದಾಹರಣೆ. ಕಾರಣವೇನೇ ಇರಬಹುದು ಹೆಣ್ಣು ಯಾವಾಗಲೂ ತೊಂದರೆ ಅನುಭವಿಸುತ್ತಾಳೆ ಎಂಬುದು ಸತ್ಯ. ಅದರಿಂದ ಆಕೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬಂತಾಗಿದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...