alex Certify ದಾರಿ ತಪ್ಪಿದ ಪತ್ನಿ: ತಡರಾತ್ರಿ ಸಿಕ್ಕಿಬಿದ್ದ ಅತ್ತಿಗೆ -ಮೈದುನನ ಜೀವ ತೆಗೆದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾರಿ ತಪ್ಪಿದ ಪತ್ನಿ: ತಡರಾತ್ರಿ ಸಿಕ್ಕಿಬಿದ್ದ ಅತ್ತಿಗೆ -ಮೈದುನನ ಜೀವ ತೆಗೆದ ಪತಿ

ವಿಜಯಪುರ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬಂಥನಾಳ ಗ್ರಾಮದಲ್ಲಿ ಅನೈತಿಕ ಸಂಬಂಧದ ಕಾರಣ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಲಕ್ಷ್ಮಣ(40) ಕೊಲೆ ಆರೋಪಿ ಎಂದು ಹೇಳಲಾಗಿದೆ. ಈತನ ಪತ್ನಿ ಮತ್ತು ಲಕ್ಷ್ಮಣನ ಚಿಕ್ಕಪ್ಪನ ಮಗನಾಗಿರುವ ಸಹೋದರ ಕೊಲೆಗೀಡಾದವರು. ಮಂಗಳವಾರ ತಡರಾತ್ರಿ ತೋಟದ ಮನೆಯಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರನಾಗಿರುವ ಸಹೋದರ ಸಂಬಂಧಿ ಅಕ್ರಮ ಚಟುವಟಿಕೆಯಲ್ಲಿ ನಿರತರಾಗಿದ್ದಾಗಲೇ ಲಕ್ಷ್ಮಣ ಗಮನಿಸಿದ್ದು, ಆಕ್ರೋಶದಿಂದ ಇಬ್ಬರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಲಕ್ಷ್ಮಣ, ಪತ್ನಿ ಮಕ್ಕಳೊಂದಿಗೆ ತೋಟದ ಮನೆಯಲ್ಲಿ ವಾಸವಾಗಿದ್ದ. ಆತನ ಪತ್ನಿ ಗಂಡನ ಸಹೋದರ ಸಂಬಂಧಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ದಾರಿ ತಪ್ಪಿದ ಪತ್ನಿಗೆ ಹಲವಾರು ಬಾರಿ ಬುದ್ಧಿಮಾತು ಹೇಳಿದರೂ ಕೂಡ ಕೇಳಿರಲಿಲ್ಲ. ಹಿರಿಯರು ಕೂಡ ರಾಜೀ ಪಂಚಾಯಿತಿ ನಡೆಸಿದ್ದರು. ಆದರೆ, ಬುದ್ಧಿ ಕಲಿಯದ ಪತ್ನಿ ಮೈದುನನೊಂದಿಗೆ ಅಕ್ರಮ ಸಂಬಂಧ ಮುಂದುವರೆಸಿದ್ದಳು. ಮಂಗಳವಾರ ಮತ್ತೆ ಪ್ರಿಯಕರನೊಂದಿಗೆ ಸಂಬಂಧ ಬೆಳೆಸಿದ್ದು, ಇದೆ ಕೊಲೆಗೆ ಕಾರಣವೆಂದು ಹೇಳಲಾಗಿದೆ. ಇಂಡಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...