alex Certify ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯಿಂದ ಆಘಾತಕಾರಿ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯಿಂದ ಆಘಾತಕಾರಿ ಕೃತ್ಯ

ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಗೌಡರಹುಂಡಿ ಗ್ರಾಮದ ವ್ಯಕ್ತಿಯ ಕೊಲೆ ಪ್ರಕರಣವನ್ನು ಹುಲ್ಲಹಳ್ಳಿ ಠಾಣೆ ಪೊಲೀಸರು ಬಯಲಿಗೆಳೆದು ಮೂವರನ್ನು ಬಂಧಿಸಿದ್ದಾರೆ.

ಶರತ್ ಕುಮಾರ್, ಮಧು ಮತ್ತು ಮಲ್ಲಿಗೆಮ್ಮ ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ. ಗೌಡರಹುಂಡಿ ಗ್ರಾಮದ ಶಿವರಾಜಪ್ಪ ಕೊಲೆಯಾದ ವ್ಯಕ್ತಿ. ಶಿವರಾಜಪ್ಪ ಅವರ ಪುತ್ರ ಮತ್ತು ಮಲ್ಲಿಗೆಮ್ಮ ಅವರ ಪುತ್ರಿ ಪ್ರೀತಿಸಿದ್ದು, ನಿಶ್ಚಿತಾರ್ಥ ನೆರವೇರಿತ್ತು.

ಆದರೆ, ಮಲ್ಲಿಗೆಮ್ಮನಿಗೆ ಈ ಮದುವೆ ಇಷ್ಟವಿರಲಿಲ್ಲ. ಶರತ್ ಕುಮಾರ್ ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಲ್ಲಿಗೆಮ್ಮ ಮಗಳ ಮದುವೆಯನ್ನು ನಿಲ್ಲಿಸಬೇಕೆಂದು ಆತನ ಮೇಲೆ ಒತ್ತಡ ಹೇರಿದ್ದಾಳೆ. ಆಕೆಯ ಮಾತಿನಂತೆ ಮಧು ಸಹಾಯದಿಂದ ಮೇ 28 ರಂದು ಶಿವರಾಜಪ್ಪನನ್ನು ಕೊಲೆ ಮಾಡಿ ರಾಮಪುರ ನಾಲೆಗೆ ಮೃತದೇಹ ಎಸೆದಿದ್ದಾರೆ. ರಾಮಪುರ ನಾಲೆಯಲ್ಲಿ ಜೂನ್ 2 ರಂದು ಮೃತದೇಹ ಪತ್ತೆಯಾಗಿದ್ದು, ಹುಲ್ಲಹಳ್ಳಿ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...