alex Certify ದಾರಿ ತಪ್ಪಿದ ‘ಪತ್ನಿ’ ಪ್ರೀತಿಸಿ ಮದುವೆಯಾಗಿದ್ದ ‘ಪತಿ’ಗೆ ಇಟ್ಲು ಮುಹೂರ್ತ: ‘ಸ್ನೇಹಿತ’ನ ಪತ್ನಿ ಮೋಹಕ್ಕೆ ಮನಸೋತು ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾರಿ ತಪ್ಪಿದ ‘ಪತ್ನಿ’ ಪ್ರೀತಿಸಿ ಮದುವೆಯಾಗಿದ್ದ ‘ಪತಿ’ಗೆ ಇಟ್ಲು ಮುಹೂರ್ತ: ‘ಸ್ನೇಹಿತ’ನ ಪತ್ನಿ ಮೋಹಕ್ಕೆ ಮನಸೋತು ಘೋರ ಕೃತ್ಯ

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿಸಿದ ಘಟನೆ  ಬೆಳಕಿಗೆ ಬಂದಿದೆ.

ಮಂಡ್ಯ ಜಿಲ್ಲೆಯ ಕಿಲಾರದ ಕಾರ್ತಿಕ್ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. 5 ವರ್ಷದ ಹಿಂದೆ ರಂಜಿತಾಳನ್ನು ಪ್ರೀತಿಸಿ ಕಾರ್ತಿಕ್ ಮದುವೆಯಾಗಿದ್ದು, ಬೆಂಗಳೂರಿಗೆ ಬಂದು ಜೀವನ ಸಾಗಿಸುತ್ತಿದ್ದರು. ದಂಪತಿಗೆ 4 ವರ್ಷದ ಹೆಣ್ಣು ಮಗುವಿದ್ದು, ಕಾರ್ತಿಕ್ ತನ್ನ ಪತ್ನಿ, ಮಗುವಿನೊಂದಿಗೆ ಸ್ನೇಹಿತ ಸಂಜೀವ್ ಮನೆಯಲ್ಲಿ ಚಾಮರಾಜಪೇಟೆಯಲ್ಲಿ ವಾಸವಾಗಿದ್ದರು.

ಸಂಜೀವ್ ಮತ್ತು ಕಾರ್ತಿಕ್ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದು, ದಿನಕಳೆದಂತೆ ಕಾರ್ತಿಕ್ ಪತ್ನಿಯೊಂದಿಗೆ ಸಂಜೀವ ಸಲುಗೆ ಬೆಳೆಸಿಕೊಂಡಿದ್ದು, ಗೆಳೆಯನಿಗೆ ಗೊತ್ತಾಗದಂತೆ ಇಬ್ಬರು ಲವ್ವಿಡವ್ವಿ ಶುರು ಮಾಡಿದ್ದಾರೆ. ಮದುವೆಯಾಗಿ ಪತ್ನಿಗೆ ವಿಚ್ಛೇದನ ನೀಡಿದ್ದ ಸಂಜೀವನಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತ ಪ್ರೀತಿಸಿದ ಗಂಡನಿದ್ದರೂ ಸಂಜೀವನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ರಂಜಿತಾ ಗಂಡನನ್ನೇ ಕೊಲೆ ಮಾಡಿಸಲು ಪ್ಲಾನ್ ಮಾಡಿಕೊಂಡಿದ್ದಾರೆ.

ಜುಲೈ 29 ರಂದು ಕಾರ್ತಿಕ್ ಗೆ ಮದ್ಯ ಕುಡಿಸಿ ಸ್ನೇಹಿತ ಸುಬ್ರಮಣಿಯೊಂದಿಗೆ ಚನ್ನಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದ ಸಂಜೀವ ಕುತ್ತಿಗೆ ಬಿಗಿದು, ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಚೀಲದಲ್ಲಿ ತುಂಬಿಕೊಂಡು ಬಂದು ಬೆಂಗಳೂರಿನ ಕುಂಬಳಗೋಡು ವೃಷಭಾವತಿ ನದಿಗೆ ಎಸೆದು ಪರಾರಿಯಾಗಿದ್ದಾರೆ.

ಆಗಸ್ಟ್ 1 ರಂದು ಪತಿ ನಾಪತ್ತೆಯಾಗಿರುವ ಬಗ್ಗೆ ಕೆಂಪೇಗೌಡ ನಗರ ಠಾಣೆಗೆ ದೂರು ನೀಡಲು ರಂಜಿತಾ ಆಗಮಿಸಿದ್ದು, ಆಕೆಯೊಂದಿಗೆ ಸಂಜೀವ ಕೂಡ ಬಂದಿದ್ದು, ಅನುಮಾನಗೊಂಡ ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬೆಳಕಿಗೆ ಬಂದಿದೆ. ಇಬ್ಬರನ್ನು ಕೂಡ ಪೊಲೀಸರು ಬಂಧಿಸಿದ್ದು, 4 ವರ್ಷದ ಹೆಣ್ಣು ಮಗು ಅನಾಥವಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...