alex Certify ಶೀಲ ಶಂಕಿಸಿದ್ದ ಗಂಡನಿಗೆ ನಿದ್ದೆ ಮಾತ್ರೆ ಕೊಟ್ಟು ಜೀವ ತೆಗೆಸಿದ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೀಲ ಶಂಕಿಸಿದ್ದ ಗಂಡನಿಗೆ ನಿದ್ದೆ ಮಾತ್ರೆ ಕೊಟ್ಟು ಜೀವ ತೆಗೆಸಿದ ಪತ್ನಿ

ಬೆಂಗಳೂರು: ಶೀಲ ಶಂಕಿಸಿದ್ದ ಗಂಡನನ್ನು ಪತ್ನಿಯೇ ಸುಪಾರಿ ನೀಡಿ ಕೊಲೆ ಮಾಡಿಸಿದ ಘಟನೆ ಬೆಂಗಳೂರಿನ ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಐವರನ್ನು ಬಂಧಿಸಲಾಗಿದೆ.

ಅಫ್ತಾಬ್, ಮೊಹಮ್ಮದ್ ಸೈಫ್, ಸೈಯದ್ ಅವೇಜ್ ಪಾಷಾ, ಶಫಿವುರ್ ರೆಹಮಾನ್, ಸರ್ವರಿ ಬೇಗಂ ಬಂಧಿತ ಆರೋಪಿಗಳೆಂದು ಹೇಳಲಾಗಿದೆ. ಹೆಗ್ಗನಹಳ್ಳಿ ನಿವಾಸಿಯಾಗಿದ್ದ ಮೊಹಮ್ಮದ್ ಹಂಜಲ(52) ತನ್ನ ಹೆಂಡತಿಯ ಬಗ್ಗೆ ಶೀಲ ಶಂಕಿಸಿ ಆಕೆಯೊಂದಿಗೆ ಜಗಳವಾಡುತ್ತಿದ್ದ. ಇದರಿಂದ ಗಂಡನನ್ನು ಕೊಲೆ ಮಾಡಲು ಸಂಚು ರೂಪಿಸಿದ ಸರ್ವರಿ ಬೇಗಂ ಮಗನೊಂದಿಗೆ ಸೇರಿ ಅಫ್ತಾಬ್, ಮೊಹಮ್ಮದ್ ಸೈಫ್, ಸೈಯದ್ ಅವೇಜ್ ಪಾಷಾ, ಅವರಿಗೆ 4.5 ಲಕ್ಷ ರೂಪಾಯಿ ಸುಪಾರಿ ನೀಡಿದ್ದಾಳೆ.

ಫೆಬ್ರವರಿ 10 ರಂದು ರಾತ್ರಿ ಗಂಡನಿಗೆ ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ಕೊಟ್ಟಿದ್ದು, ಬೆಳಗಿನ ಜಾವ ನಿದ್ದೆಯಲ್ಲಿದ್ದ ಸಂದರ್ಭದಲ್ಲಿ ಕೈಕಾಲು ಕಟ್ಟಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...