alex Certify ಬುಧವಾರದ ದಿನ ಭವಿಷ್ಯ ಹಾಗೂ ರಾಶಿಫಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬುಧವಾರದ ದಿನ ಭವಿಷ್ಯ ಹಾಗೂ ರಾಶಿಫಲ

ಮೇಷ ರಾಶಿ

ಪ್ರಾಮಾಣಿಕ ಪ್ರಯತ್ನದಿಂದ ಕೆಲಸದಲ್ಲಿ ಯಶಸ್ಸು, ಬಂಧು ಮಿತ್ರರ ಆಗಮನದಿಂದ ಸಂತಸ, ಧರ್ಮ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿಯಿಂದ ಮನೆಯಲ್ಲಿ ಶುಭ.

ವೃತ್ತಿ ರಂಗದಲ್ಲಿ ಯಶಸ್ಸು, ಗೃಹ ನಿರ್ಮಾಣ ಕಾರ್ಯದಲ್ಲಿ ಸ್ವಲ್ಪ ಅಡೆತಡೆಗಳು ಬರಲಿವೆ. ಸೇವಕ ವರ್ಗದವರಿಂದ ಸಹಾಯ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನ ಸಂಗ್ರಹ ಮಾಡಿ ನಷ್ಟ ಎದುರಾಗಬಹುದು. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ. ವ್ಯಾಪಾರ ವ್ಯವಹಾರಸ್ಥರಿಗೆ ಸರಕಾರಿ ಅಧಿಕಾರಿಗಳಿಂದ ಲಾಭ.

ಅದೃಷ್ಟ ಸಂಖ್ಯೆ:- 7

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ವೃಷಭ ರಾಶಿ

ಗೃಹಸ್ಥರಿಗೆ ಶುಭ ಕಾರ್ಯಗಳು. ಹಣಕಾಸಿನಲ್ಲಿ ಗಮನವಿರಲಿ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಆದಾಯ ಬರಲಿದೆ. ಶನಿಗ್ರಹ ಮಕರ ರಾಶಿಯಲ್ಲಿ ಇದ್ದರೆ ಮಾನಸಿಕ ಖಿನ್ನತೆ ಕಾಡುತ್ತದೆ. ಇದು ನಿಮಗೆ ಅಪ್ರಯೋಜನವನ್ನು ನೀಡುತ್ತದೆ. ಕುಟುಂಬದ ಸಂತೋಷ ಹೆಚ್ಚಾಗುತ್ತದೆ. ಆರ್ಥಿಕ ಪ್ರಯೋಜನಗಳ ಮೊತ್ತವು ಕಂಡುಬರುತ್ತದೆ.

ದೈಹಿಕ ಸಂಕಟಗಳು ರೂಪುಗೊಳ್ಳುತ್ತಿವೆ. ಅಧಿಕ ವ್ಯಾಯಾಮ, ಯೋಗ, ಧ್ಯಾನ ನಡೆಸಬಹುದು. ಬ್ಯಾಂಕ್ನಲ್ಲಿ ಕೆಲಸ ಮಾಡುವವರು ಸಂಕಷ್ಟ ಎದುರಿಸಬೇಕಾಗುತ್ತದೆ, ಇದು ಮಾತ್ರವಲ್ಲ, ತಪ್ಪು ಮಾರ್ಗದಿಂದ ಗಳಿಸುವ ಪ್ರಯತ್ನವು ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ. ಪತ್ನಿಯೊಂದಿಗೆ ವಿರಸ ಭಾವನೆ ಕಾಣುವುದು.

ಅದೃಷ್ಟ ಸಂಖ್ಯೆ:- 4

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಮಿಥುನ ರಾಶಿ

ಹಾನಿ ಎನ್ನುವುದು ನಿಮ್ಮ ಕೆಟ್ಟ ನಿರ್ಧಾರಗಳ ಮೊತ್ತವಾಗಿದೆ. ಉನ್ನತ ಶಿಕ್ಷಣದಲ್ಲಿನ ಅಡೆತಡೆಗಳು ನಿಮ್ಮ ಮನಸ್ಸನ್ನು ನೋಯಿಸುತ್ತದೆ. ಮಾನಸಿಕ ಅಸ್ಥಿರತೆ ಇರುತ್ತದೆ. ಮಹತ್ವಾಕಾಂಕ್ಷೆಗಳ ನೆರವೇರಿಕೆಗೆ ಅಡ್ಡಿಯಾಗಬಹುದು.

ಪ್ರೀತಿಯ ಸಂಬಂಧಗಳು ತಲೆಕೆಳಗಾಗುತ್ತವೆ. ಹೊಸ ವ್ಯವಹಾರಕ್ಕೆ ಇದು ಉತ್ತಮ ಸಮಯವಲ್ಲ. ಉತ್ಪ್ರೇಕ್ಷೆ ಗೊಂದಲವನ್ನು ಹೆಚ್ಚಿಸುತ್ತದೆ. ಹಠಾತ್ ಪ್ರವಾಸದ ಸಾಧ್ಯತೆಯಿದೆ. ವಿರೋಧಿಗಳು ಪ್ರಕ್ಷುಬ್ಧರಾಗುತ್ತಾರೆ.

ಅದೃಷ್ಟ ಸಂಖ್ಯೆ:- 2

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಕರ್ಕಾಟಕ ರಾಶಿ

ಬೇರೆಯವರಿಗೆ ಸಂಬಂಧಿಸಿದ ಯಾವುದೇ ಅಹಿತಕರ ಸುದ್ದಿಗಳನ್ನು ನೀವು ಈ ವಾರದಲ್ಲಿ ಕೇಳಬಹುದು. ಜನರು ನಿಮ್ಮನ್ನು ಕಾರ್ಯಕ್ಷೇತ್ರದಲ್ಲಿ ವಿರೋಧಿಸುತ್ತಾರೆ. ಉದ್ಯಮಿಗಳಿಗೆ ಹೊಸ ಅವಕಾಶಗಳು ಸಿಗಲಿವೆ. ಕುಟುಂಬದಲ್ಲಿ ಸಾಮರಸ್ಯ ಇರುವುದಿಲ್ಲ.

ಆರ್ಥಿಕವಾಗಿ ಉತ್ತಮ ಚೇತರಿಕೆ. ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ತೋರಿ ಬಂದಾವು. ವ್ಯಾಪಾರ, ವ್ಯವಹಾರದಲ್ಲಿ ಪೈಪೋಟಿ ಎದುರಾದೀತು. ಹೊಸ ಚಿಂತನೆಗೆ ಸದ್ಯ ಸಕಾಲವಲ್ಲ. ದಿನಾಂತ್ಯ ಶುಭವಿದೆ. ನವದಂಪತಿಗಳಿಗೆ ಶುಭ ಸೂಚನೆ ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ತುಸು ಹಿನ್ನಡೆ.

ಅದೃಷ್ಟ ಸಂಖ್ಯೆ:- 5

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಸಿಂಹ ರಾಶಿ

ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚಿನ ಲಾಭವಿದೆ. ಸಂಚಾರದಲ್ಲಿ ಜಾಗ್ರತೆ ವಹಿಸಬೇಕಾಗುತ್ತದೆ. ಶುಭವಿದೆ. ಸಾಂಸಾರಿಕವಾಗಿ ಹೆಚ್ಚಿನ ಜವಾಬ್ದಾರಿ ಹೊರ ಬೇಕಾದೀತು. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಅಭಿವೃದ್ಧಿ ತೋರಿ ಬಂದರೂ ಲೆಕ್ಕಾಚಾರ ಸರಿಯಾಗಿರಲಿ. ಸ್ನೇಹಿತ ವರ್ಗದವರೊಡನೆ ಅನಾವಶ್ಯಕ ಕಲಹ ತೋರಿ ಬಂದೀತು.

ಶುಭ ಕಾರ್ಯದ ಚಿಂತನೆ ಕಾರ್ಯಗತವಾದೀತು. ಸಾಂಸಾರಿಕವಾಗಿ, ಕೌಟುಂಬಿಕವಾಗಿ ಸಮಾಧಾನದ ವಾತಾವರಣ. ಗೃಹ ನಿರ್ಮಾಣಕ್ಕೆ ಜಾಗ ಖರೀದಿಗೆ ಉತ್ತಮ ಕಾಲ.

ಅದೃಷ್ಟ ಸಂಖ್ಯೆ:- 9

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ವಾಸ್ತುಶಾಸ್ತ್ರದ ಈ ವಿಷಯಗಳ ಬಗ್ಗೆ ಇರಲಿ ಗಮನ

ಕನ್ಯಾ ರಾಶಿ

ಈ ದಿನ ಸದುಪಯೋಗಿಸಿಕೊಳ್ಳಿರಿ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗದ ಮಾಹಿತಿ ಲಭಿಸಲಿದೆ. ಉದ್ಯಮಿಗಳಿಗೆ ವ್ಯವಹಾರ ಹೆಚ್ಚಿಸಲು ಜಾಗ್ರತೆ ವಹಿಸಬೇಕಾಗುತ್ತದೆ. ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಆಸಕ್ತಿ ತೋರಿ ಬರಲಿದೆ. ಸಂಚಾರದಲ್ಲಿ ಜಾಗ್ರತೆ.

ಆರೋಗ್ಯ ಭಾಗ್ಯ ಸುಧಾರಿಸಲಿದೆ. ಪ್ರಯಾಣ, ದೂರ ಸಂಚಾರದಲ್ಲಿ ಕಾರ್ಯಸಿದ್ಧಿಯಾಗಲಿದೆ. ಆರ್ಥಿಕವಾಗಿ ಮುನ್ನಡೆ ತೋರಿ ಬಂದೀತು.

ಅದೃಷ್ಟ ಸಂಖ್ಯೆ:- 6

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ತುಲಾ ರಾಶಿ

ವಿದ್ಯಾರ್ಥಿಗಳು ಪ್ರಯತ್ನಬಲದ ಸಾರ್ಥಕತೆಯನ್ನು ಪಡೆದಾರು. ನಿರುದ್ಯೋಗಿಗಳಿಗೆ ಅವಕಾಶಗಳು ಲಭಿಸಬಹುದು. ಹೊಸ ಮಿತ್ರರ ಪರಿಚಯದಿಂದ ಕಾರ್ಯಸಾಧನೆಯಾದೀತು. ದಾಂಪತ್ಯದಲ್ಲಿ ಸಂತಾನಭಾಗ್ಯದ ಕುರುಹು ಕಾಣಿಸಲಿದೆ. ವ್ಯಾಪಾರ, ವ್ಯವಹಾರಗಳು ಲಾಭಕರ.

ಆರ್ಥಿಕವಾಗಿ ಅಡೆತಡೆಗಳು ತೋರಿ ಬಂದಾವು. ವೃತ್ತಿರಂಗದಲ್ಲಿ ಧನಾಗಮನಕ್ಕೆ ತೊಂದರೆ ಇರದು. ಮೇಲಧಿಕಾರಿಗಳಿಗೆ ಕಾರ್ಮಿಕ ವರ್ಗದವರು ಕಿರಿಕಿರಿ ತಂದಾರು. ವೃತ್ತಿರಂಗದಲ್ಲಿ ಉತ್ತಮ ನಿರ್ಧಾರ ಲಾಭಕರವು. ಸಾಂಸಾರಿಕವಾಗಿ, ಕೌಟುಂಬಿಕವಾಗಿ ಹೊಂದಿಕೊಳ್ಳುವ ಮನೋಭಾವ ಸಮಾಧಾನಕ್ಕೆ ಕಾರಣವಾಗಲಿದೆ.

ಅದೃಷ್ಟ ಸಂಖ್ಯೆ:- 1

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ವೃಶ್ಚಿಕ ರಾಶಿ

ಉದ್ಯೋಗಸ್ಥರಿಗೆ ಸ್ಥಾನ ಬದಲಾವಣೆ ತಂದೀತು. ಶುಭ ಕಾರ್ಯಕ್ಕೆ ಅನುಕೂಲವಾಗಲಿದೆ. ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಇದು ಸಕಾಲವಲ್ಲ. ಯೋಗ್ಯ ವಯಸ್ಕರಿಗೆ ಕಾದು ನೋಡುವ ಪರಿಸ್ಥಿತಿ ಬಂದೀತು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಿದೆ. ಸಂಚಾರದಲ್ಲಿ ಜಾಗ್ರತೆ ಇರಲಿ.

ಕಚೇರಿ ಕೆಲಸ ಕಾರ್ಯಗಳಲ್ಲಿ ಆಡೆತಡೆಗಳು ತೋರಿ ಬಂದರೂ ಸಮಾಧಾನ ಚಿತ್ತರಾಗಿ ಮುಂದುವರಿಯಬೇಕಾದೀತು. ಹಿತಶತ್ರುಗಳ ಬಗ್ಗೆ ಜಾಗ್ರತೆ ವಹಿಸಿರಿ. ಸಂಚಾರದಲ್ಲಿ ಜಾಗ್ರತೆ ವಹಿಸಿರಿ. ಸರಕಾರಿ ಅಧಿಕಾರಿ ವರ್ಗದವರಿಗೆ ಬದಲಾವಣೆ ಸಾಧ್ಯತೆ ಇರುವುದು.

ಅದೃಷ್ಟ ಸಂಖ್ಯೆ:- 3

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಧನುಸ್ಸು ರಾಶಿ

ನಿರುದ್ಯೋಗಿಗಳಿಗೆ ಹೊಸ ಉದ್ಯೋಗದ ಬಗೆ ಹೊಸ ಅವಕಾಶಗಳು ದೊರಕಲಿವೆ. ದಾಂಪತ್ಯದಲ್ಲಿ ಮನಸ್ತಾಪ ತಂದೀತು. ಉದ್ಯೋಗಿಗಳಿಗೆ ವಿದೇಶದಲ್ಲಿ ಆಕರ್ಷಕವಾದ ದುಡಿಮೆಗೆ ಅವಕಾಶಗಳು ಒದಗಿ ಬರಲಿವೆ.

ನಿರುದ್ಯೋಗಿಗಳಿಗೆ ಉದ್ಯೋಗ ಕಂಡುಕೊಳ್ಳಲು ಇದು ಸಕಾಲ, ವ್ಯಾಪಾರ ವ್ಯವಹಾರಗಳು ಚೇತರಿಕೆ ಕೊಟ್ಟು ಆದಾಯ ವೃದ್ಧಿಸಲಿವೆ.

ಅದೃಷ್ಟ ಸಂಖ್ಯೆ:- 6

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಮಕರರಾಶಿ

ಸಾಮಾಜಿಕವಾಗಿ ಉನ್ನತ ಸ್ಥಾನಮಾನಗಳು, ಕ್ರಿಯಾಶೀಲತೆಯಲ್ಲಿ ಪ್ರಶಂಸೆ ಸಿಗಲಿದೆ. ಮುಖ್ಯವಾಗಿ ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ನಿಮ್ಮಲ್ಲಿ ಎಚ್ಚರವಿರಲಿ. ಮಾತಿನಿಂದ ಅನಾವಶ್ಯಕ ಮನಸ್ತಾಪವಾಗದಂತೆ ನೋಡಿರಿ.

ಕ್ರೀಡಾ ಜಗತ್ತಿನ ಪಟುಗಳಿಗೆ ಜಯವು ಕಾದಿದೆ. ಹದಗೆಟ್ಟ ಆರೋಗ್ಯ ಉತ್ತಮ ರೀತಿಯಲ್ಲಿ ಸುಧಾರಿಸಲಿದೆ. ಕೃಷಿ ಹಾಗೂ ರೈತವರ್ಗಕ್ಕೆ ಸಕಾಲದಲ್ಲಿ ಬೆಳೆಗಳ ವಿಲೇವಾರಿ ಧನಲಾಭವನ್ನು ಕೊಡಲಿದೆ.

ಅದೃಷ್ಟ ಸಂಖ್ಯೆ:- 9

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ದೊಡ್ಡ ನಷ್ಟದ ‘ಮುನ್ಸೂಚನೆ’ ನೀಡುತ್ತೆ ಈ ಘಟನೆ

ಕುಂಭ ರಾಶಿ

ಆರೋಗ್ಯದಲ್ಲಿ ಜಾಗ್ರತೆ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಜೀವನದ ಬಹುಮುಖ್ಯ ಗುರಿಯೊಂದನ್ನು ಸಾಧಿಸಲಿದ್ದೀರಿ. ಹಳೆಯ ಬಾಕಿ ಕೆಲಸಗಳು ಅತೀ ಶೀಘ್ರದಲ್ಲಿ ನೆರವೇರಲಿವೆ.

ರಾಜಕೀಯ ವರ್ಗದವರಿಗೆ ಉತ್ತಮ ಭವಿಷ್ಯವಿದೆ. ಆರ್ಥಿಕವಾಗಿ ಹಾಗೂ ಸಾಂಸಾರಿಕವಾಗಿ ಉತ್ತಮ ಕೆಲಸಗಳಾದರೂ ಕೆಲವು ಹಿತಶತ್ರುಗಳ ಕಾಟದಿಂದ ಮನಸ್ಸಿಗೆ ನೋವುಂಟಾಗಲಿದೆ. ಹೊಗಳಿಕೆಗೆ ಮರುಳಾಗ‌ದಿರಿ. ಹಂತ ಹಂತವಾಗಿ ಯಶಸ್ಸು ಕಂಡು ಬಂದೀತು.

ಅದೃಷ್ಟ ಸಂಖ್ಯೆ:- 8

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಮೀನ ರಾಶಿ

ಲಾಭ ಸ್ಥಾನಗತನಾದ ಗುರುವಿನಿಂದಾಗಿ ಅನಿರೀಕ್ಷಿತ ಎಷ್ಟೋ ಕಾರ್ಯಸಾಧನೆಯಾಗಲಿವೆ. ಮುಖ್ಯವಾಗಿ ದೂರ ಸಂಚಾರ, ಪ್ರಯಾಣದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವಿದೆ. ದಿನಾಂತ್ಯದಲ್ಲಿ ಸಂಭ್ರಮವಿದೆ.

ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಕೋರ್ಟು ಕಚೇರಿ ಕೆಲಸದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಮುಖ್ಯವಾಗಿ ಯಾವುದೇ ಕೆಲಸಕಾರ್ಯ ಅರ್ಧಕ್ಕೆ ನಿಂತು ಆರ್ಥಿಕ ಮುಗ್ಗಟ್ಟು ಕಾಡಲಿದೆ. ಮುಂದುವರಿಯಿರಿ. ಕೆಟ್ಟ ಜನರ ಸಹಕಾರದಿಂದ ಅಪಕೀರ್ತಿ ಉಂಟಾದೀತು. ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ಅದೃಷ್ಟ ಸಂಖ್ಯೆ:- 3

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ವಿಳಾಸ:- ಶ್ರೀ ಧನಲಕ್ಷ್ಮೀ ಗಣಪತಿ ಜ್ಯೋತಿಷ್ಯ ಕೇಂದ್ರ,

10th, ಕ್ರಾಸ್ ಮಹಾಗಣಪತಿ ದೇವಸ್ಥಾನದ ಹತ್ತಿರ,

ಸಂಪಿಗೆ ರಸ್ತೆ, ಮಲ್ಲೇಶ್ವರಂ ಬೆಂಗಳೂರು 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...