alex Certify ‘ಕಾಂತಾರ’ ದೃಶ್ಯವೊಂದರ ಇಂಟ್ರಸ್ಟಿಂಗ್ ಮಾಹಿತಿ ಹಂಚಿಕೊಂಡ ಗುರುವ ಪಾತ್ರಧಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾಂತಾರ’ ದೃಶ್ಯವೊಂದರ ಇಂಟ್ರಸ್ಟಿಂಗ್ ಮಾಹಿತಿ ಹಂಚಿಕೊಂಡ ಗುರುವ ಪಾತ್ರಧಾರಿ…!

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರಾ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿಯೇ ಹೊಸ ದಾಖಲೆ ಬರೆಯುತ್ತಿದೆ. ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ ಈ ಚಿತ್ರ ಈಗ ಇತರೆ ಭಾಷೆಗಳಲ್ಲಿಯೂ ಬಿಡುಗಡೆಯಾಗಿದ್ದು, ಅಲ್ಲಿಯೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಜೊತೆಗೆ ವಿದೇಶಗಳಲ್ಲೂ ಸಹ ಚಿತ್ರ ತುಂಬಿದ ಪ್ರದರ್ಶನಗಳನ್ನು ಕಾಣುತ್ತಿದೆ.

‘ಕಾಂತರಾ’ ಈಗಾಗಲೇ 150 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದ್ದು, ಈಗಲೂ ಗಳಿಕೆಯ ನಾಗಾಲೋಟ ಮುಂದುವರೆದಿದೆ. ಈ ಚಿತ್ರದಲ್ಲಿ ಪ್ರತಿಯೊಬ್ಬ ಪಾತ್ರಧಾರಿಯು ಅತ್ಯದ್ಭುತವಾಗಿ ನಟಿಸಿದ್ದು, ಜೊತೆಗೆ ಸುಂದರ ದೃಶ್ಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದರ ಮಧ್ಯೆ ಚಿತ್ರವೊಂದರ ದೃಶ್ಯದ ಕುರಿತು ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ, ಕುತೂಹಲಕಾರಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಗುರುವ ದೈವದ ವೇಷ ಹಾಕಿದ್ದು, ಶಿವ ಪಾತ್ರಧಾರಿ ಜೈಲಿನಲ್ಲಿದ್ದಾಗ ದೈವ ಅಳುವ ದೃಶ್ಯವೊಂದು ಇದೆ. ಇದು ಎಷ್ಟು ನೈಜವಾಗಿ ಬಂದಿದೆ ಎಂದರೆ ಪ್ರೇಕ್ಷಕರು ಈ ಸಂದರ್ಭದಲ್ಲಿ ಭಾವುಕರಾಗುತ್ತಾರೆ.

ಈ ದೃಶ್ಯದ ಚಿತ್ರೀಕರಣ ನಡೆಯುವ ವೇಳೆ ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ ತಡವಾಗಿ ಬಂದಿದ್ದರಂತೆ. ಉಡುಪಿ ಜೈಲಿನಲ್ಲಿ ಇದರ ಚಿತ್ರೀಕರಣ ನಡೆದಿದ್ದು, ಸ್ವರಾಜ್ ತಡವಾಗಿ ಬಂದಿದ್ದಕ್ಕೆ ರಿಷಬ್ ಶೆಟ್ಟಿ, ಸಿಟ್ಟಿನಲ್ಲಿದ್ದರಂತೆ. ಯಾವಾಗಲೂ ಹೆಸರು ಹಿಡಿದು ಮಾತನಾಡಿಸುವ ರಿಷಬ್ ಅಂದು ಮೌನವಾಗಿದ್ದು, ಸ್ವರಾಜ್ ಶೆಟ್ಟಿ ಅವರಿಗೆ ನಿಜವಾಗಿಯೂ ಅಳು ತರಿಸಿದೆ. ಹೀಗಾಗಿ ನಿಜವಾಗಿಯೂ ಅತ್ತೆ ಬಿಟ್ಟಿದ್ದಾರೆ. ಹೀಗಾಗಿ ಆ ದೃಶ್ಯ ಅಷ್ಟೊಂದು ನೈಜವಾಗಿ ಮೂಡಿ ಬಂದಿದೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...