alex Certify ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಹಾಡಹಗಲೇ ನಡೆದ ಘೋರ ಕೃತ್ಯ: ಎಲ್ಲರೆದುರಲ್ಲೇ ಕತ್ತು ಸೀಳಿ ಮಹಿಳೆ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಹಾಡಹಗಲೇ ನಡೆದ ಘೋರ ಕೃತ್ಯ: ಎಲ್ಲರೆದುರಲ್ಲೇ ಕತ್ತು ಸೀಳಿ ಮಹಿಳೆ ಹತ್ಯೆ

ಗದಗ: ಗದಗ ನಗರದಲ್ಲಿ ಹಾಡಹಗಲೇ ಮಹಿಳೆಯನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಎಲ್ಲರೆದುರಲ್ಲೇ ನಡೆದ ಘೋರ ಹತ್ಯೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗದಗದ ಗಂಗಿಮಡಿ ಬಡಾವಣೆ ನಿವಾಸಿ ಶೋಭಾ ಲಮಾಣಿ ಕೊಲೆಯಾದ ಮಹಿಳೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಚೇತನ್ ಕುಮಾರ್ ಮತ್ತು ರೋಹನ್ ಕುಮಾರ್ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಕೋರ್ಟ್ ಕಲಾಪ ಮುಗಿಸಿ ಆಟೋದಲ್ಲಿ ಹೊರಟಿದ್ದ ಶೋಭಾ ಬೇಕರಿಯೊಂದರ ಬಳಿ ಜೊತೆಗಿದ್ದ ಮಗುವಿಗೆ ತಿನಿಸು ಕೊಡಿಸಲು ಬಂದಿದ್ದಾಳೆ. ಅಲ್ಲೇ ಇದ್ದ ದುಷ್ಕರ್ಮಿಗಳು ದಾಳಿ ಮಾಡಿ ಶೋಭಾ ಲಮಾಣಿಯ ಕತ್ತು ಕೊಯ್ದು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇಬ್ಬರು ಹಂತಕರನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

2020ರಲ್ಲಿ ರಮೇಶ್ ಕುಮಾರ್ ಎಂಬಾತನ ಕೊಲೆಯಾಗಿದ್ದು, ಈ ಕೊಲೆ ಪ್ರಕರಣದಲ್ಲಿ ಶೋಭಾ ಮತ್ತು ಆಕೆಯ ಗಂಡ ವಾಸೀಂ ಭಾಗಿಯಾಗಿದ್ದ ಆರೋಪವಿತ್ತು. ಜಾಮೀನು ಪಡೆದು ಹೊರಬಂದಿದ್ದ ಶೋಭಾ ಹುಬ್ಬಳ್ಳಿಯಲ್ಲಿ ವಾಸವಾಗಿದ್ದು, ಕೋರ್ಟ್ ವಿಚಾರಣೆಗಾಗಿ ಗದಗ ನಗರಕ್ಕೆ ಬಂದಿದ್ದ ವೇಳೆ ಹತ್ಯೆ ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...