alex Certify 30 ವರ್ಷದ ಹಿಂದಿನ ಸೇಡು…! ಮಗನ ಸಾವಿಗೆ ಕಾರಣವಾಗಿದ್ದ ದಂಪತಿಗಳ ಬರ್ಬರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

30 ವರ್ಷದ ಹಿಂದಿನ ಸೇಡು…! ಮಗನ ಸಾವಿಗೆ ಕಾರಣವಾಗಿದ್ದ ದಂಪತಿಗಳ ಬರ್ಬರ ಹತ್ಯೆ

30 ವರ್ಷಗಳ ಹಿಂದೆ ತನ್ನ ಮಗನ ಸಾವಿಗೆ ಕಾರಣವಾಗಿದ್ದ ದಂಪತಿಯನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ಹತ್ಯೆ ಮಾಡಿದ ವ್ಯಕ್ತಿಯೂ ಈಗ ಸಾವು – ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾನೆ.

ಪ್ರಕರಣದ ವಿವರ: ತಿರುವನಂತಪುರಂನ ಶಶಿಧರನ್ ಹಾಗೂ ಪ್ರಭಾಕರ ಕುರುಪ್ ನೆರೆಹೊರೆಯ ನಿವಾಸಿಗಳಾಗಿದ್ದು, 30 ವರ್ಷಗಳ ಹಿಂದೆ ಶಶಿಧರನ್ ಪುತ್ರನಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದ ಪ್ರಭಾಕರ ಬಹ್ರೈನ್ ಗೆ ಕಳಿಸಿದ್ದನ್ನು ಎನ್ನಲಾಗಿದೆ.

ಆದರೆ ಅಲ್ಲಿ ಶಶಿಧರನ್ ಪುತ್ರನಿಗೆ ಕೆಲಸ ಸಿಗದ ಕಾರಣ ಖಿನ್ನತೆಗೆ ಒಳಗಾದ ಆತ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಶಿಧರನ್ ನಾಯರ್, ಪ್ರಭಾಕರ್ ಕುರುಪ್ ವಿರುದ್ಧ ದೂರು ದಾಖಲಿಸಿದ್ದು, ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಸುದೀರ್ಘವಾಗಿ ನಡೆದಿತ್ತು.

ಶುಕ್ರವಾರದಂದು ಪ್ರಭಾಕರ್ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, ಹೀಗಾಗಿ ಶನಿವಾರ ಬೆಳಗ್ಗೆಯೇ ಇವರುಗಳ ಮನೆ ಮುಂದೆ ಬಂದಿದ್ದ ಶಶಿಧರನ್ ಜಗಳ ತೆಗೆದಿದ್ದ. ಈ ವೇಳೆ ಜಗಳ ವಿಕೋಪಕ್ಕೆ ಹೋಗಿದ್ದು, ಪ್ರಭಾಕರನ್ ಗೆ ಸುತ್ತಿಗೆಯಿಂದ ಹೊಡೆದಿದ್ದಾನೆ. ಬಳಿಕ ಸೀಮೆಎಣ್ಣೆ ಸುರಿದು ದಂಪತಿಗೆ ಬೆಂಕಿ ಹಚ್ಚಿದ್ದು ಇಬ್ಬರು ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಶಶಿಧರನ್ ಕೂಡ ಶೇಕಡ 60ರಷ್ಟು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...