alex Certify ಬಸ್ ಹಾಗೂ ಮಾರುತಿ ಓಮ್ನಿ ಮುಖಾಮುಖಿ; ಓರ್ವ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ಹಾಗೂ ಮಾರುತಿ ಓಮ್ನಿ ಮುಖಾಮುಖಿ; ಓರ್ವ ಸಾವು

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜೋಗ ಸಮೀಪ ಬಸ್ ಹಾಗೂ ಮಾರುತಿ ಓಮ್ನಿ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಅಪಘಾತದಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆತರಲಾಗಿದೆ.

ಜೋಗ ವರ್ಕ್ ಮನ್ ಬ್ಲಾಕ್ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಮಾರುತಿ ಓಮ್ನಿ ನಡುವೆ ಅಪಘಾತ ಸಂಭವಿಸಿದೆ. ಬಳೆ ಪದ್ಮಾವತಿ ದೇವಸ್ಥಾನದ ಅರ್ಚಕರಾಗಿದ್ದ ದೇವ ಪೂಜಾರಿ(60) ಮೃತಪಟ್ಟವರು.

ಬಳೆ ಪದ್ಮಾವತಿ ದೇವಾಲಯದ ಧರ್ಮದರ್ಶಿ ವೀರಾ ರಾಜೇಂದ್ರ ಜೈನ್(70) ಗಂಭೀರ ಗಾಯಗೊಂಡವರು. ಚಿಕ್ಕಮಗಳೂರಿನಿಂದ ಕಾರವಾರ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್, ಜೋಗದಿಂದ ಬಳೆ ಪದ್ಮಾವತಿಗೆ ತೆರಳುತ್ತಿದ್ದ ಓಮ್ನಿ ನಡುವೆ ಅಪಘಾತ ಸಂಭವಿಸಿದೆ. ಸರಿಯಾದ ಸಮಯಕ್ಕೆಬಾರದ ಅಂಬುಲೆನ್ಸ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...