ರಾಮನಗರ: ಅಪ್ರಾಪ್ತ ಬಾಲಕನಿಗೆ ಬೈಕ್ ಓಡಿಸಲು ಕೊಟ್ಟಿದ್ದ ಮಾಲೀಕನಿಗೆ ರಾಮನಗರ ಚನ್ನಪಟ್ಟಣದ ಜೆ.ಎಂ.ಎಫ್.ಸಿ. ನ್ಯಾಯಾಲಯ 34,000 ರೂ. ದಂಡ ಹಾಗೂ ಒಂದು ದಿನ ಸಜೆ ವಿಧಿಸಿ ಆದೇಶಿಸಿದೆ.
ಚನ್ನಪಟ್ಟಣದ ಅನ್ವರ್ ಖಾನ್ ದಂಡನೆಗೆ ಒಳಗಾದ ವ್ಯಕ್ತಿ ಎಂದು ಹೇಳಲಾಗಿದೆ. ತಮ್ಮ ಸಂಬಂಧಿಕರ ಮಗನಿಗೆ ಅವರು ಬೈಕ್ ಕೊಟ್ಟಿದ್ದು, ಬಾಲಕ ಮೃತಪಟ್ಟಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.
4 ತಿಂಗಳ ಹಿಂದೆ ತಮ್ಮ ದ್ವಿಚಕ್ರ ವಾಹನವನ್ನು ಬಾಲಕನಿಗೆ ಚಾಲನೆ ಮಾಡಲು ಕೊಟ್ಟಿದ್ದರು. ಚನ್ನಪಟ್ಟಣದ ಕೆಎಸ್ಆರ್ಟಿಸಿ ಡಿಪೋ ಎದುರು ಬೈಕ್ ಚಾಲನೆ ವೇಳೆಯಲ್ಲಿ ಆಯತಪ್ಪಿ ಕೆಳಗೆ ಬಿದ್ದು ಬಾಲಕ ಮೃತಪಟ್ಟಿದ್ದ. ವಿಚಾರಣೆ ನಡೆಸಿದ ನ್ಯಾಯಾಲಯ 34,000 ರೂ. ದಂಡ ಹಾಗೂ ಒಂದು ದಿನ ಸಜೆ ವಿಧಿಸಿ ಆದೇಶಿಸಿದೆ.