alex Certify ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಈ ನೀರು ಸಂಧಿವಾತಕ್ಕೆ ಪರಿಣಾಮಕಾರಿ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಈ ನೀರು ಸಂಧಿವಾತಕ್ಕೆ ಪರಿಣಾಮಕಾರಿ ಮದ್ದು

ಅರಿಶಿನ ಸೇವನೆಯಿಂದ ಆರೋಗ್ಯಕ್ಕಿರುವ ಸಾಕಷ್ಟು ಪ್ರಯೋಜನಗಳ ಬಗ್ಗೆ ನಿಮಗೆಲ್ಲ ಗೊತ್ತಿರಬಹುದು. ಅದರಲ್ಲೂ ಅರಿಶಿನ ಕಷಾಯ ಅಥವಾ ಅರಿಶಿನ ನೀರು ಕುಡಿಯುವುದರಿಂದ ಅನೇಕ ರೀತಿಯ ಸಮಸ್ಯೆಗಳನ್ನು ಹೋಗಲಾಡಿಸಬಹುದು.

ಚಿಟಿಕೆ ಅರಿಶಿನವನ್ನು ಹಾಲಿಗೆ ಹಾಕಿ ಕುದಿಸಿಕೊಂಡು ಕುಡಿದರೆ ಒಳ್ಳೆಯದು ಅಂತಾ ಹೇಳಲಾಗುತ್ತದೆ. ಇದಕ್ಕಿಂತಲೂ ಪರಿಣಾಮಕಾರಿ ಅಂದ್ರೆ ಅರಿಶಿನ ನೀರು. ಇಂದಿನಿಂದಲೇ ಇದನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ಭಾರತೀಯರು ಸಾಮಾನ್ಯವಾಗಿ ಪ್ರತಿ ಅಡುಗೆಗೂ ಅರಿಶಿನ ಬಳಸ್ತಾರೆ. ಅನೇಕ ಆಯುರ್ವೇದ ಔಷಧಿಗಳಲ್ಲಿಯೂ ಇದನ್ನು ಬಳಸಲಾಗುತ್ತದೆ. ಅರಿಶಿನವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ದೇಹದ ಗಂಭೀರ ಸಮಸ್ಯೆಗಳನ್ನು ನಿವಾರಿಸುವ ಅಂಶಗಳನ್ನು ಹೊಂದಿದೆ. ಚರ್ಮದ ಸೌಂದರ್ಯಕ್ಕೂ ಅರಿಶಿನ ಬೇಕು. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ.

ಅರಿಶಿನವನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಹೆಚ್ಚಿನವರು ಅರಿಶಿನವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸುತ್ತಾರೆ. ವಾಸ್ತವವಾಗಿ, ಅರಿಶಿನದಲ್ಲಿ ಅಡಗಿರುವ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ದೇಹದ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.ಅರಿಶಿನವನ್ನು ನೀರಿಗೆ ಹಾಕಿ ಕುದಿಸಿಕೊಂಡು ಸೋಸಿ ಕುಡಿಯಿರಿ. ಇದರಿಂದ ಗಾಯಗಳು ಗುಣವಾಗುತ್ತವೆ.

ಸಂಧಿವಾತದಿಂದ ಉಂಟಾಗುವ ಉರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಅರಿಶಿನ ನೀರು ಪರಿಣಾಮಕಾರಿಯಾಗಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರನ್ನು ಕುಡಿಯಿರಿ. ಇದರಿಂದ ಸ್ನಾಯು ಸೆಳೆತ, ಕಾಲು ನೋವು, ಮಂಡಿ ನೋವಿನ ಸಮಸ್ಯೆಗಳು ಗುಣವಾಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...