alex Certify ಎಣ್ಣೆ ಪಾರ್ಟಿಯಲ್ಲಿ ಸಂಭವಿಸಿತು ಘೋರ ದುರಂತ..! ಮದಿರೆ ನಶೆಯಲ್ಲಿ ಸ್ನೇಹಿತನ ಪ್ರಾಣವನ್ನೇ ತೆಗೆದ ಪಾಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಣ್ಣೆ ಪಾರ್ಟಿಯಲ್ಲಿ ಸಂಭವಿಸಿತು ಘೋರ ದುರಂತ..! ಮದಿರೆ ನಶೆಯಲ್ಲಿ ಸ್ನೇಹಿತನ ಪ್ರಾಣವನ್ನೇ ತೆಗೆದ ಪಾಪಿ

ಫ್ರೆಂಡ್ಸ್​ ಎಲ್ಲಾ ಒಂದೆಡೆ ಸೇರಿದಾಗ ಎಣ್ಣೆ ಪಾರ್ಟಿ ಮಾಡೋದು ಕಾಮನ್​..! ಆದರೆ ಇಲ್ಲೊಬ್ಬ ಸ್ನೇಹಿತನ ಜೊತೆ ಮದ್ಯಪಾನ ಮಾಡಲು ಹೋಗಿ ಬಾರದ ಲೋಕಕ್ಕೆ ತೆರಳಿದ್ದಾನೆ.

ಮಹಾರಾಷ್ಟ್ರದ ಕುರ್ಲಾ ಎಂಬಲ್ಲಿ ಈ ಘಟನೆ ನಡೆದಿದ್ದು 27 ವರ್ಷದ ವ್ಯಕ್ತಿ ಮದ್ಯಪಾನ ಮಾಡುತ್ತಿದ್ದ ವೇಳೆ ಸ್ನೇಹಿತನ ಕೆನ್ನೆಗೆ ಬಾರಿಸಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆ.

ಶಾಕಿಂಗ್​​: ಬಟ್ಟೆ ವಾಶ್​ ಮಾಡಿಲ್ಲ ಅಂತಾ ಪುಟ್ಟ ಬಾಲಕಿ ಮೈಮೇಲೆ ಬಿಸಿನೀರು ಚೆಲ್ಲಿದ ಪಾಪಿ ಮಹಿಳೆ…​..!

ರಾಹುಲ್​ ಕಾಂಬ್ಳೆ ಹಾಗೂ ಅವಿನಾಶ್​ ಬಾಲೇಕರ್​​ ಒಟ್ಟಾಗಿ ಕುಳಿತು ಮದ್ಯಪಾನ ಮಾಡುತ್ತಿದ್ದ ವೇಳೆಯಲ್ಲಿ ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿದೆ. ಇದರಿಂದ ಕೋಪಗೊಂಡಿದ್ದ ರಾಹುಲ್​ ಕಾಂಬ್ಳೆಯು ಅವಿನಾಶ್​ ಬಾಲೇಕರ್​ ಕೆನ್ನೆಗೆ ಬಾರಿಸಿದ್ದಾನೆ. ಕಾಂಬ್ಳೆ ಏಟಿನ ರಭಸಕ್ಕೆ ಅವಿನಾಶ್​ ಸ್ಥಳದಲ್ಲಿಯೇ ಕುಸಿದುಬಿದ್ದದ್ದಾನೆ.

ಪ್ರಜ್ಞೆ ತಪ್ಪಿ ಬಿದ್ದಿದ್ದ ಅವಿನಾಶ್​ ಬಾಲೇಕರ್​ನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಯ್ತಾದರೂ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಕೊಲೆ ಯತ್ನದ ಆರೋಪದ ಅಡಿಯಲ್ಲಿ ವಿಬಿ ನಗರ ಠಾಣಾ ಪೊಲೀಸರು ಆರೋಪಿ ರಾಹುಲ್​ ಕಾಂಬ್ಳೆಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...