ಶಾರ್ಜಾದಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಹಾಗೂ ಅಲ್ಲಿನ ಉದ್ಯಮಿಯೊಬ್ಬರು ನೀಡಿದ ಆರ್ಥಿಕ ನೆರವಿನೊಂದಿಗೆ ಕೊರೋನಾ ವೈರಸ್ ಸಂದಿಗ್ದತೆಯಲ್ಲಿ ಸಿಲುಕಿದ್ದ 68 ಮಂದಿ ತವರಿಗೆ ಮರಳಿದ್ದಾರೆ.
ಯುಎಇನಲ್ಲಿ ವಾಸವಾಗಿರುವ ಅನನ್ಯ ಶ್ರೀವಾಸ್ತವ ಎಂಬ 8ನೇ ತರಗತಿ ವಿದ್ಯಾರ್ಥಿನಿ ತನ್ನ ಪಿಗ್ಗಿ ಬ್ಯಾಂಕ್ನಲ್ಲಿ ಕೂಡಿಟ್ಟಿದ್ದ 61 ಸಾವಿರ ರೂಪಾಯಿಗಳನ್ನು ಇಬ್ಬರು ಭಾರತೀಯರ ವಿಮಾನದ ಟಿಕೆಟ್ಗೆ ನೀಡಿದ್ದಾಳೆ. ಈ ಇಬ್ಬರೊಂದಿಗೆ ಇನ್ನೂ 169 ಪ್ರಯಾಣಿಕರು ದುಬೈ-ಗುವಾಹಾಟಿ ವಿಮಾನವೇರಿ ಸ್ವದೇಶಕ್ಕೆ ಮರಳಿದ್ದಾರೆ.
ಇದೇ ವೇಳೆ, ದೆಹಲಿ ಮೂಲದ ಬ್ಯುಸಿನೆಸ್ಮನ್ ಅಮೀರುದ್ದೀನ್ ಅಜ್ಮಲ್ ಎಂಬಾತ 1,00,000 ದಿರ್ಹಾಮ್ಗಳನ್ನು ದೇಣಿಗೆ ನೀಡುವ ಮೂಲಕ 66 ಮಂದಿಗೆ ಭಾರತಕ್ಕೆ ಮರಳಲು ನೆರವಾಗಿದ್ದಾರೆ. ಅಜ್ಮಲ್ ಮೂಲತಃ ಈಶಾನ್ಯ ಭಾರತದವರಾಗಿದ್ದಾರೆ.