ಸೆಲೆಬ್ರಿಟಿ ಶೆಫ್ ವಿಕಾಸ್ ಖನ್ನಾಗೆ ಈಗ ಶ್ಲಾಘನೆಗಳ ಮಹಾಪೂರವೇ ಹರಿದಿದೆ.
ಈದ್ ಹಬ್ಬದ ಸಂದರ್ಭದಲ್ಲಿ ಅವರು ಎರಡು ಲಕ್ಷ ಜನರಿಗೆ ಆಹಾರ ವಿತರಿಸಿದ್ದಾರೆ. ಇದರಿಂದ ಖುಷಿಗೊಂಡ ನೆಟ್ಟಿಗರು ವಿಕಾಸ್ ರನ್ನು ಕೊಂಡಾಡಿದ್ದಾರೆ.
ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಮುಂಬೈನಲ್ಲಿ ಅವರು ಫೀಡ್ ಇಂಡಿಯಾ ಎಂಬ ಕಾರ್ಯಕ್ರಮ ನಡೆಸಿ, ಹಸಿದವರಿಗೆ ಆಹಾರ ನೀಡುತ್ತಾ ಬಂದಿದ್ದರು.
ಇದೀಗ ಈದ್ ಸಂದರ್ಭದಲ್ಲಿ ಆಹಾರದ ಕೌಂಟರ್ ಗಳನ್ನು ತೆರೆದು ಉಚಿತವಾಗಿ ವಿತರಿಸಲಾಗಿದೆ. ಅದರ ವಿಡಿಯೋವನ್ನು ವಿಕಾಸ್ ಖನ್ನಾ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸಾವಿರಾರು ಮಂದಿ ಖನ್ನಾರ ಶ್ರಮವನ್ನು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.