ಗುಂಡ್ಲುಪೇಟೆ: ಮೃತವ್ಯಕ್ತಿಯ ಖಾತೆಗೆ 20 ಸಾವಿರ ರೂ. ಮಾಸಾಶನದ ಹಣ ಜಮಾ ಆಗಿದೆ. ಕಂದಾಯ ಇಲಾಖೆಯ ಜನನ ಮತ್ತು ಮರಣ ನೋಂದಣಿ ಶಾಖೆಯಲ್ಲಿ ವ್ಯಕ್ತಿ ಮೃತಪಟ್ಟ ಬಗ್ಗೆ ದಾಖಲೆಯಿದ್ದು ಕುಟುಂಬದವರು ಮರಣ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ.
ಮಾಸಾಶನಕ್ಕೆ ಫಲಾನುಭವಿಗಳು ಅಲೆದಾಡುವ ಪರಿಸ್ಥಿತಿಯಲ್ಲಿ ಮೃತವ್ಯಕ್ತಿಯ ಖಾತೆಗೆ ಸುಮಾರು 20 ಸಾವಿರ ರೂ. ಮಾಸಾಶನ ಜಮಾ ಆಗಿರುವುದು ಅಚ್ಚರಿ ತಂದಿದೆ. ಅಂದ ಹಾಗೆ, ಕುಟುಂಬದವರು ಮರಣ ಪ್ರಮಾಣ ಪತ್ರವನ್ನು ಬ್ಯಾಂಕ್ ಗೆ ನೀಡದ ಕಾರಣ ಪಿಂಚಣಿ ರದ್ದು ಮಾಡಿರಲಿಲ್ಲ. ಇದರಿಂದಾಗಿ ನಿಯಮಿತವಾಗಿ ಅವರ ಖಾತೆಗೆ ಹಣ ಜಮಾ ಆಗುತ್ತಿದೆ. ಇತ್ತೀಚಿಗೆ ಕುಟುಂಬದವರು ಮೃತ ವ್ಯಕ್ತಿಯ ಬ್ಯಾಂಕ್ ಖಾತೆಯ ಸ್ಟೇಟ್ಮೆಂಟ್ ಪಡೆದ ಸಂದರ್ಭದಲ್ಲಿ 20 ಸಾವಿರ ರೂಪಾಯಿ ಜಮಾ ಆಗಿರುವುದು ಗೊತ್ತಾಗಿದೆ ಎನ್ನಲಾಗಿದೆ.