ಬೆಂಗಳೂರಿನ ಪಾದರಾಯಪುರದಲ್ಲಿ ಕೊರೋನಾನ ಸೇವೆಗೆ ತೆರಳಿದ ಆರೋಗ್ಯ ಇಲಾಖೆ, ಬಿಬಿಎಂಪಿ ಮತ್ತು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ.
ಬ್ಯಾರಿಕೇಡ್ ಕಿತ್ತು, ಚೆಕ್ ಪೋಸ್ಟ್ ಗಳನ್ನು ಧ್ವಂಸ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೊರೋನಾ ಸೋಂಕು ತಗಲಿದ ಶಂಕಿತರನ್ನು ಕ್ವಾರಂಟೈನ್ ನಲ್ಲಿ ಇಡಲು ಕರೆತರಲು ಕೊರೋನಾ ವಾರಿಯರ್ಸ್ ತೆರಳಿದ್ದಾರೆ.
ಆದರೆ, ಕ್ವಾರಂಟೈನ್ ಗೆ ಬರಲು ಒಪ್ಪದ ಶಂಕಿತರು ಗಲಾಟೆ ನಡೆಸಿದ್ದಾರೆ. 200 ಕ್ಕೂ ಅಧಿಕ ಮಂದಿ ಗುಂಪುಗೂಡಿ ಗಲಾಟೆ ನಡೆಸಿದ್ದಾರೆ. ಗುಂಪುಗೂಡಿದ ದುಷ್ಕರ್ಮಿಗಳು ಆರೋಗ್ಯ ಇಲಾಖೆ ಬಿಬಿಎಂಪಿ ಮತ್ತು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಬ್ಯಾರಿಕೇಡ್ ಗಳನ್ನು ಧ್ವಂಸಗೊಳಿಸಿದ್ದಾರೆ.
ಪಾದರಾಯನಪುರದಲ್ಲಿ ಲಾಕ್ ಡೌನ್ ಪಾಲನೆಗಾಗಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದ್ದು ರಾತ್ರಿಯಿಡಿ ಕಾರ್ಯಾಚರಣೆ ನಡೆಸಿ ಹಲವರನ್ನು ವಶಕ್ಕೆ ಪಡೆದುಕೊಂಡಿದೆ. ಭದ್ರತೆ ಹೆಚ್ಚಿಸಲಾಗಿದೆ.