ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ.
ಹೋಂ ಗಾರ್ಡ್ ಗಣೇಶ್(30) ಪತ್ನಿಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಣೇಶ್ ಪತ್ನಿ ಗೀತಾ(29) ಜೊತೆಗೆ ಜಗಳವಾಡಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ದಂಪತಿ ನಡುವೆ ಹಲವು ದಿನಗಳಿಂದ ಜಗಳವಾಗಿದ್ದು 15 ದಿನಗಳ ಹಿಂದೆ ಗೀತಾ ತವರು ಮನೆಗೆ ಹೋಗಿದ್ದಾರೆ. ಅಲ್ಲಿಗೆ ತೆರಳಿದ ಗಣೇಶ್ ಮರಳಿ ಬರುವಂತೆ ಪತ್ನಿಯನ್ನು ಕರೆದಿದ್ದು ಇಬ್ಬರ ನಡುವೆ ಜಗಳವಾಗಿ ಗಣೇಶ್ ಪತ್ನಿಯನ್ನು ಹೊಡೆದು ಕೊಲೆ ಮಾಡಿದ್ದಾನೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.