alex Certify ಕೃಷ್ಣ ಜನ್ಮಾಷ್ಟಮಿ ಸಂಭ್ರಮದ ವೇಳೆಯಲ್ಲೇ ದುರಂತ: ಜನದಟ್ಟಣೆಯಿಂದ ಉಸಿರುಗಟ್ಟಿ ಇಬ್ಬರು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೃಷ್ಣ ಜನ್ಮಾಷ್ಟಮಿ ಸಂಭ್ರಮದ ವೇಳೆಯಲ್ಲೇ ದುರಂತ: ಜನದಟ್ಟಣೆಯಿಂದ ಉಸಿರುಗಟ್ಟಿ ಇಬ್ಬರು ಸಾವು

ಕೃಷ್ಣ ಜನ್ಮಾಷ್ಟಮಿ ವೇಳೆಯಲ್ಲಿ ಮಥುರಾದ ಬಂಕಿ ಬಿಹಾರಿ ದೇವಸ್ಥಾನದಲ್ಲಿ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿದ್ದಾರೆ ಅಸ್ವಸ್ಥರಾದ ಅನೇಕರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಜನ್ಮಾಷ್ಟಮಿ ಆಚರಣೆಯ ಹಿನ್ನೆಲೆಯಲ್ಲಿ ಎಲ್ಲಾ ವರ್ಗದ ಭಕ್ತರು ಮತ್ತು ವಿದೇಶದಿಂದ ಬಂದವರು ಶುಕ್ರವಾರ ಕೃಷ್ಣ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು, ಕೃಷ್ಣ ಜನಿಸಿದ ಸ್ಥಳವಾದ ಮಥುರಾ ವೃಂದಾವನದ ಬಂಕಿ ಬಿಹಾರಿ ದೇವಸ್ಥಾನದಲ್ಲಿ ಗರಿಷ್ಠ ಜನದಟ್ಟಣೆ ಕಂಡುಬಂದಿದೆ. ಸಾವಿರಾರು ಜನ ದೇವಸ್ಥಾನದಲ್ಲಿ ಕಿಕ್ಕಿರಿದು ತುಂಬಿದ್ದು ಉಸಿರುಗಟ್ಟುವಿಕೆಗೆ ಕಾರಣವಾಯಿತು. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಉಸಿರಾಟದ ತೊಂದರೆಗೊಳಗಾದ ಆರು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ದೇವಾಲಯದ ಆವರಣದಲ್ಲಿ ಕಾಲಿಡಲು ಸಹ ಸ್ಥಳವಿಲ್ಲ, ಇದರಿಂದಾಗಿ ಜನರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಈ ಘಟನೆಯು ಮಂಗಳ ಆರತಿಯ ಸಮಯದಲ್ಲಿ ಮಧ್ಯರಾತ್ರಿಯ ನಂತರ ಸಂಭವಿಸಿದೆ. ಮೃತರಿಬ್ಬರನ್ನು ನೋಯ್ಡಾ ನಿವಾಸಿ ನಿರ್ಮಲಾ ದೇವಿ ಮತ್ತು ಜಬಲ್‌ಪುರದ ವೃಂದಾವನ ನಿವಾಸಿ ರಾಜ್‌ಕುಮಾರ್ ಎಂದು ಗುರುತಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...