alex Certify ‘ಆಷಾಢ’ ಮಾಸದಲ್ಲೇಕೆ ಶುಭ ಕಾರ್ಯ ಮಾಡುವುದಿಲ್ಲ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆಷಾಢ’ ಮಾಸದಲ್ಲೇಕೆ ಶುಭ ಕಾರ್ಯ ಮಾಡುವುದಿಲ್ಲ…?

ಆಷಾಢ ಮಾಸ ಆರಂಭವಾಗಿದೆ. ಆಷಾಢ ಮುಗಿದ ಬಳಿಕ ಆರಂಭವಾಗುವ ಶ್ರಾವಣ ಮಾಸದಿಂದ ಹಿಂದೂಗಳ ಹಬ್ಬದ ಸಾಲು ಆರಂಭವಾಗುತ್ತದೆ.

ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಅಲ್ಲದೇ ನವ ವಿವಾಹಿತೆಯರು ಆಷಾಢ ಮಾಸ ಮುಗಿಯುವವರೆಗೂ ತವರು ಮನೆಗೆ ತೆರಳುತ್ತಾರೆ.

ಅತ್ತೆ- ಸೊಸೆ ಒಂದೇ ಹೊಸಿಲನ್ನು ಈ ಮಾಸದಲ್ಲಿ ದಾಟಬಾರದೆಂಬ ಕಾರಣಕ್ಕೆ ಈ ಪದ್ದತಿ ಮಾಡಲಾಗಿದೆಯಾದರೂ ಹೊಸದಾಗಿ ವಿವಾಹವಾದಾಕೆ ಈ ನೆಪದಲ್ಲಿಯಾದರೂ ಒಂದು ತಿಂಗಳ ಕಾಲ ತವರು ಮನೆಯಲ್ಲಿರುವ ಅವಕಾಶ ದೊರೆಯುತ್ತದೆ. ಅಲ್ಲದೇ ಆಷಾಢ ಮಾಸದ ಅಮಾವಾಸ್ಯೆಯಂದು ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪ್ರಾಪ್ತಿಗಾಗಿ ಭೀಮೇಶ್ವರ ವ್ರತವನ್ನು ಆಚರಿಸುತ್ತಾರೆ.

ಆಷಾಢ ಮಾಸದಲ್ಲಿ ಮಳೆ ಜೋರಾಗಿರುವ ಕಾರಣ ರೈತಾಪಿ ವರ್ಗಕ್ಕೆ ಹೊಲ- ಗದ್ದೆಗಳಲ್ಲಿ ಆಪಾರ ಕೆಲಸವಿರುತ್ತಿತ್ತು. ಅಲ್ಲದೇ ಮಳೆಯ ಕಾರಣ ಜನ ಹೊರ ಬರುವುದು ಕಷ್ಟವಾಗುತ್ತಿತ್ತು. ಹೀಗಾಗಿ ಯಾವುದೇ ವ್ಯವಹಾರ ಅಥವಾ ಶುಭ ಸಮಾರಂಭ ಮಾಡಲು ಕಾಲಾವಕಾಶ ಸಿಗದ ಕಾರಣ, ಆಷಾಢ ಮಾಸದಲ್ಲಿ ಇಂತಹ ಕಾರ್ಯಗಳಿಗೆ ತಿಲಾಂಜಲಿ ಇಡಲಾಯಿತು ಎನ್ನಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...