alex Certify ಸೆಲೆಬ್ರಿಟಿ ಟ್ವೀಟ್​ ವಾರ್​ ಮಧ್ಯೆ ಏಕತೆಯ ಸಂದೇಶ ಸಾರಿದ ಟೀಂ ಇಂಡಿಯಾ ಆಟಗಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಲೆಬ್ರಿಟಿ ಟ್ವೀಟ್​ ವಾರ್​ ಮಧ್ಯೆ ಏಕತೆಯ ಸಂದೇಶ ಸಾರಿದ ಟೀಂ ಇಂಡಿಯಾ ಆಟಗಾರರು

ದೇಶದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ವಿಚಾರವಾಗಿ ಪಾಪ್​ ಗಾಯಕಿ ರಿಹನ್ನಾ ಟ್ವಿಟರ್​ ಮೂಲಕ ಧ್ವನಿ ಎತ್ತಿರುವ ವಿಚಾರ ನಿಮಗೆಲ್ಲ ಗೊತ್ತೇ ಇದೆ. ಇದೀಗ ಈಕೆಯ ಟ್ವೀಟ್​ ಬಳಿಕ ಭಾರತದ ಬಹುತೇಕ ರಾಜಕಾರಣಿಗಳು, ಬಾಲಿವುಡ್​ ತಾರೆಯರು ಹಾಗೂ ಕ್ರಿಕೆಟ್​ ಆಟಗಾರರು ಇದೇ ಟ್ವಿಟರ್​ ಬಳಸಿ ಏಕತೆಯ ಸಂದೇಶ ಸಾರುತ್ತಿದ್ದಾರೆ.

ಗೃಹ ಮಂತ್ರಿ ಅಮಿತ್​ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಭಾರತ ರತ್ನ ಸಚಿನ್​ ತೆಂಡೂಲ್ಕರ್​ ಸೇರಿದಂತೆ ಅನೇಕರು ದೇಶದ ವಿಚಾರದಲ್ಲಿ ವಿದೇಶದವರ ಅಭಿಪ್ರಾಯದ ಅಗತ್ಯವಿಲ್ಲ ಎಂಬರ್ಥದಲ್ಲಿ ಟ್ವೀಟ್ ಮಾಡುವ ಮೂಲಕ ರಿಹನ್ನಾಗೆ ಟಾಂಗ್​ ನೀಡಿದ್ದಾರೆ.

ಇದೀಗ ಈ ವಿಚಾರವಾಗಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಕೂಡ ಟ್ವೀಟಾಯಿಸಿದ್ದಾರೆ. ದೇಶದಲ್ಲಿ ಭಿನ್ನಾಭಿಪ್ರಾಯ ಮೂಡಿರುವ ಈ ಸಂದರ್ಭದಲ್ಲೂ ನಾವೆಲ್ಲ ಒಗ್ಗಟ್ಟಾಗಿ ಇರೋಣ. ರೈತರು ನಮ್ಮ ದೇಶದ ಅವಿಭಾಜ್ಯ ಅಂಗವಾಗಿದ್ದಾರೆ. ಅಲ್ಲದೇ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕು ಮತ್ತೆ ದೇಶದಲ್ಲಿ ಶಾಂತಿ ನೆಲೆಸಲಿದೆ ಎಂಬ ನಂಬಿಕೆ ನನಗಿದೆ ಎಂದು ಬರೆದುಕೊಂಡಿದ್ದಾರೆ.

ಇತ್ತ ಟೀಂ ಇಂಡಿಯಾ ಉಪನಾಯಕ ಅಜಿಂಕ್ಯ ರಹಾನೆ ಕೂಡ ಈ ವಿಚಾರವಾಗಿ ಟ್ವೀಟ್​ ಮಾಡಿ, ನಾವೆಲ್ಲ ಒಗ್ಗಟ್ಟಾಗಿ ನಿಂತರೆ ಯಾವುದೇ ಸಮಸ್ಯೆ ಪರಿಹಾರವಾಗಲ್ಲ ಎಂಬ ವಿಷಯವೇ ನಮ್ಮ ಮುಂದೆ ಇರೋದಿಲ್ಲ. ಹೀಗಾಗಿ ನಾವೆಲ್ಲ ಒಂದಾಗಿ ಇರೋಣ. ಆಂತರಿಕ ಸಮಸ್ಯೆಗಳನ್ನ ಒಂದಾಗಿ ಪರಿಹರಿಸೋಣ ಎಂದು ಟ್ವೀಟಾಯಿಸಿದ್ದಾರೆ.

— Virat Kohli (@imVkohli) February 3, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...