alex Certify ಮದುವೆ ಕೆಲಸಕ್ಕೆ ಬಂದವರಿಗೆ ಕಡಿಮೆ ಹಣ ನೀಡಿ ವಂಚನೆ: ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಕೆಲಸಕ್ಕೆ ಬಂದವರಿಗೆ ಕಡಿಮೆ ಹಣ ನೀಡಿ ವಂಚನೆ: ದೂರು

ಬೆಂಗಳೂರು: ಮದುವೆ ಕೆಲಸಕ್ಕೆ ಬಂದವರಿಗೆ ಕಡಿಮೆ ಹಣ ನೀಡಿ ವಂಚಿಸಲಾಗಿದ್ದು, ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುಗುಣ ಎಂಬ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಿರುಪತ್ತೂರಿನಿಂದ ಮದುವೆ ಕೆಲಸಕ್ಕೆ 60 ಜನ ಬಂದಿದ್ದು, ಒಬ್ಬರಿಗೆ ದಿನಕ್ಕೆ 1,250 ರೂ. ಕೊಡುವುದಾಗಿ ಹೇಳಿ ಕರೆದುಕೊಂಡು ಬಂದಿದ್ದರು. ಶನಿವಾರ, ಭಾನುವಾರ ಅರಮನೆ ಮೈದಾನದಲ್ಲಿ ವಿವಾಹ ನಡೆದಿದ್ದು, ಕಾರ್ಯಕ್ರಮದಲ್ಲಿ 60 ಜನ ಕೆಲಸ ಮಾಡಿದ್ದಾರೆ.

ಈಗ ಕೆಲಸ ಮುಗಿದ ಮೇಲೆ 1 ಸಾವಿರ ರೂಪಾಯಿ ಕೊಡುವುದಾಗಿ ಹೇಳುತ್ತಿದ್ದಾರೆ. ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ನಮಗೆ ಮಾತುಕೊಟ್ಟಂತೆ ಕೆಲಸದ ಮಾಡಿದ ದುಡ್ಡು ಕೊಡಿ ಎಂದು ಪಟ್ಟು ಹಿಡಿದು ಠಾಣೆಗೆ ದೂರು ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Rozsáhlá matematická hádanka Tradiční český recept na rassolnik s ječnou Test pro nejpozornější: Najděte jiný pták do 5 sekund Недопустимые ошибки при еде после тренировки: тренер