![](https://kannadadunia.com/wp-content/uploads/2023/01/927366.jpg)
ಮಧ್ಯಪ್ರದೇಶದಲ್ಲಿ ಭಾರತ್ ಯಾತ್ರಾ ವೇಳೆ ಹರಿದ ಬಟ್ಟೆಯಲ್ಲಿ ನಡುಗುತ್ತಿದ್ದ ಮೂವರು ಬಡ ಹುಡುಗಿಯರನ್ನು ಭೇಟಿಯಾದ ನಂತರ ಯಾತ್ರೆಯಲ್ಲಿ ಕೇವಲ ಟೀ ಶರ್ಟ್ ಧರಿಸಲು ನಿರ್ಧರಿಸಿದ್ದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.
“ಈ ಬಿಳಿ ಟಿ-ಶರ್ಟ್ ಅನ್ನು ಏಕೆ ಧರಿಸಿದ್ದೇನೆ ಎಂದು ಜನರು ನನ್ನನ್ನು ಕೇಳುತ್ತಾರೆ. ನನಗೆ ಚಳಿಯಾಗುವುದಿಲ್ಲ, ನಾನು ಕಾರಣವನ್ನು ಹೇಳುತ್ತೇನೆ. ಯಾತ್ರೆ ಪ್ರಾರಂಭವಾದಾಗ ಕೇರಳದಲ್ಲಿ ಬಿಸಿ ಮತ್ತು ಆರ್ದ್ರವಾಗಿತ್ತು. ಆದರೆ ನಾವು ಮಧ್ಯಪ್ರದೇಶವನ್ನು ಪ್ರವೇಶಿಸಿದಾಗ ಸ್ವಲ್ಪ ಚಳಿ ಇತ್ತು. ಒಂದು ದಿನ ಹರಿದ ಬಟ್ಟೆಯಲ್ಲಿದ್ದ ಮೂವರು ಬಡ ಹೆಣ್ಣು ಮಕ್ಕಳು ನನ್ನ ಬಳಿಗೆ ಬಂದರು. ನಾನು ಅವರನ್ನು ನೋಡಿದಾಗ, ಅವರು ಸರಿಯಾದ ಬಟ್ಟೆಯನ್ನು ಧರಿಸಿರಲಿಲ್ಲ ಹಾಗೂ ಅವರು ನಡುಗುತ್ತಿದ್ದರು. ಅಂದೇ ನಾನು ಇನ್ಮುಂದೆ ನಡುಗುವುದಿಲ್ಲ ಎಂದು ನಿರ್ಧರಿಸಿದೆ ಎಂದರು.