alex Certify ವಾರಣಾಸಿಯಲ್ಲಿ ಭಿಕ್ಷೆ ಬೇಡುತ್ತಿದ್ದಾಳೆ ಬಿಎಸ್ಸಿ ಪದವೀಧರೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾರಣಾಸಿಯಲ್ಲಿ ಭಿಕ್ಷೆ ಬೇಡುತ್ತಿದ್ದಾಳೆ ಬಿಎಸ್ಸಿ ಪದವೀಧರೆ….!

ಕಲಿಕೆಯಲ್ಲಿ ಮುಂದಿದ್ದು, ಉನ್ನತಾಭ್ಯಾಸ ಮಾಡಿದ್ದರೆ ಹಾಗೂ ಇಂಗ್ಲೀಷ್ ಚೆನ್ನಾಗಿ ಬಲ್ಲವರಾಗಿದ್ದರೆ ಖಂಡಿತಾ ಉತ್ತಮ ಜೀವನ ನಡೆಸುತ್ತಿರುತ್ತಾರೆ ಅಂತಾ ಅನೇಕರು ಭಾವಿಸುತ್ತಿರುತ್ತಾರೆ.

ಆದರೆ, ಕೆಲವೊಬ್ಬರ ಜೀವನದಲ್ಲಿ ಇದು ಸುಳ್ಳಾಗಿದೆ. ಇದೀಗ ವೈರಲ್ ಆಗಿರುವ ವಾರಣಾಸಿಯಲ್ಲಿನ ನಿರ್ಗತಿಕ ಮಹಿಳೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ.

ಸ್ವಾತಿ ಎಂದು ಗುರುತಿಸಲ್ಪಟ್ಟ ಮಹಿಳೆಯು ವಾರಣಾಸಿಯ ಅಸ್ಸಿ ಘಾಟ್‌ನಲ್ಲಿ ಭಿಕ್ಷೆ ಬೇಡುತ್ತಿದ್ದಳು.  ಅವಳು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಿದ್ದಳು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ಆಕೆಯ ಬಳಿ ಬಂದು ಮಾತನಾಡಿದ್ದಾನೆ.

ಮಹಿಳೆಯ ಹಿನ್ನೆಲೆಯನ್ನು ಕೇಳುತ್ತಾ ಅದನ್ನು ವಿಡಿಯೋ ಮಾಡಿದ್ದಾರೆ. ಸ್ವಾತಿಯು ಕಂಪ್ಯೂಟರ್ ಸೈನ್ಸ್ ಪದವೀಧರೆಯಾಗಿದ್ದು, ತಾನು ದಕ್ಷಿಣ ಭಾರತದಿಂದ ಇಲ್ಲಿಗೆ ಬಂದಿರುವುದಾಗಿ ಹೇಳಿದ್ದಾರೆ.

ಇನ್ನು ಉತ್ತಮ ವಿದ್ಯಾಭ್ಯಾಸ ಮಾಡಿದ ಈಕೆ, ತನ್ನ ಕುಟುಂಬ ಮತ್ತು ಪತಿಯೊಂದಿಗೆ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದಳು. ಆದರೆ, ಈಕೆಯ ದುರಾದೃಷ್ಟ ಎಂಬಂತೆ ಮೊದಲ ಮಗುವಿಗೆ ಜನ್ಮ ನೀಡಿದಾಗ ಸ್ವಾತಿಯ ದೇಹದ ಬಲಭಾಗವು ಪಾರ್ಶ್ವವಾಯುವಿಗೆ ಒಳಗಾಗಿದೆ. ಇದರಿಂದ ಈಕೆಯನ್ನು ಬಲವಂತವಾಗಿ ಮನೆಯಿಂದ ಹೊರಹಾಕಲಾಯಿತು. ನಂತರ ಈಕೆ ತಲುಪಿದ್ದು ವಾರಣಾಸಿಗೆ.

ಸ್ವಾತಿ ಕಳೆದ ಮೂರು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದು, ದಾರಿಹೋಕರ ದಾನವೇ ಆಕೆಯ ಜೀವನಕ್ಕಿರುವ ಭರವಸೆಯಾಗಿದೆ. ಈಕೆಯನ್ನು ನೋಡುವಾಗ ಕೆಲವರಿಗೆ ಮಾನಸಿಕವಾಗಿ ಜರ್ಜರಿತಳಾದ ರೀತಿಯಂತೆ ಕಾಣಬಹುದು. ಆದರೆ, ಸ್ವಾತಿ ಮಾತ್ರ ಇನ್ನೂ ಕೂಡ ತನ್ನ ಜೀವನವನ್ನು ಉತ್ತಮಪಡಿಸಬಹುದಾದ ಮಾರ್ಗಗಳನ್ನು ನಿರೀಕ್ಷಿಸುತ್ತಿದ್ದಾಳೆ. ಇನ್ನು ವಿಡಿಯೋ ಮಾಡಿದ ವ್ಯಕ್ತಿ ಬಳಿ ಕೂಡ ತನಗೆ ಕೆಲಸ ಮಾಡುವ ಬಯಕೆಯಿದೆ ಎಂಬುದನ್ನು ಸ್ವಾತಿ ವ್ಯಕ್ತಪಡಿಸಿದ್ದಾಳೆ.

ಇಂತಹ ಘಟನೆಗಳನ್ನು ನೋಡಿದ್ರೆ, ಕೆಲವೊಮ್ಮೆ ಜೀವನ ಎಷ್ಟು ಕ್ರೂರ ಎಂದೆನಿಸಿಬಿಡುತ್ತದೆ. ಅಂದಹಾಗೆ, 90ರ ಹರೆಯದ ಐಐಟಿ ಪದವೀಧರನೊಬ್ಬ ಗ್ವಾಲಿಯರ್‌ನಲ್ಲಿ ಭಿಕ್ಷೆ ಬೇಡುತ್ತಿರುವ ಬಗ್ಗೆ ಕಳೆದ ವರ್ಷ ವರದಿಯಾಗಿತ್ತು. ಸುರೇಂದ್ರ ವಶಿಷ್ಠ್ ಎಂಬುವವರು 1969 ರಲ್ಲಿ ಐಐಟಿ ಕಾನ್ಪುರದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಮತ್ತು 1972 ರಲ್ಲಿ ಲಕ್ನೋದಿಂದ ಎಲ್‌ಎಲ್‌ಎಂ ಅನ್ನು ಪೂರ್ಣಗೊಳಿಸಿದರು. ಆದರೆ, ಜೀವನದ ಏರಿಳಿತಗಳು ಅವರನ್ನು ಭಿಕ್ಷೆ ಬೇಡುವ ಹಂತಕ್ಕೆ ತಂದವು.

ವಿಡಿಯೋ ವೀಕ್ಷಿಸಿ:

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...