alex Certify ಕುಡಿತಕ್ಕೆ ದಾಸನಾಗಿದ್ದ ಪತಿಯನ್ನು ಸರಪಳಿಯಿಂದ ಕಟ್ಟಿದ ಪತ್ನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿತಕ್ಕೆ ದಾಸನಾಗಿದ್ದ ಪತಿಯನ್ನು ಸರಪಳಿಯಿಂದ ಕಟ್ಟಿದ ಪತ್ನಿ…!

ಚಿತ್ರದುರ್ಗ: ಆತ ಮದುವೆಯಾಗಿ ಇಬ್ಬರು ಮಕ್ಕಳ ತಂದೆ. ಆದರೆ ಕುಡಿತದ ದಾಸನಾಗಿದ್ದನು. ಮನೆ – ಮಡದಿ – ಮಕ್ಕಳು ಎನ್ನದೇ ದಿನಪೂರ್ತಿ ಕುಡಿದು, ಊಟವನ್ನೂ ಮಾಡದೇ ಹಾಗೆ ಇರುತ್ತಿದ್ದನಂತೆ. ಇದರಿಂದ ಬೇಸತ್ತ ಅವನ ಪತ್ನಿ ಸರಪಳಿ ಹಾಕಿ ಕುಡುಕ ಗಂಡನನ್ನು ತನ್ನ ತವರು ಮನೆಯಲ್ಲಿ ಕೂಡಿ ಹಾಕಿದ್ದಾಳೆ.

ಹೌದು, ಈ ಘಟನೆ ನಡೆದಿರೋದು ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದ ಹೊಸಹಳ್ಳಿಯಲ್ಲಿ. ರಂಗನಾಥ್ ಹಾಗೂ ಅಮೃತಾ ಕಳೆದ ಕೆಲವು ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಈ ವೇಳೆ ಗಂಡ ಮನೆಯಿಂದ ಹೊರಹೋಗದಂತೆ ತಡೆಯಲು ಕಾಲಿಗೆ ಸರಪಳಿ ಬಿಗಿದು, ಮನೆಯಲ್ಲಿನ ಕಂಬಕ್ಕೆ ಕಟ್ಟಿ ಬೀಗ ಹಾಕಿದ್ದಾರೆ ಅಮೃತ.

ಇನ್ನು ಈ ವಿಚಾರ ರಂಗನಾಥ್‌ನ ಪಾಲಕರಿಗೆ ಗೊತ್ತಾಗಿದೆ. ಕೂಡಲೇ ಅವರು ಹೊಸಹಳ್ಳಿಗೆ ತೆರಳಿದ್ದಾರೆ. ಜೊತೆಗೆ ರಂಗನಾಥ್ ಅವರನ್ನು ಬಿಡಿಸಿದ್ದಾರೆ. ಇನ್ನು ಪಿಎಸ್‌ಐ ಪರಶುರಾಮ್ ಎನ್. ಲಮಾಣಿ ತನಿಖೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...