alex Certify ಪರಪ್ಪನ ಅಗ್ರಹಾರಕ್ಕೆ ನಟ ದರ್ಶನ್ ನೋಡಲು ಬಂದ ಆ ‘ಯುವತಿ’ ಯಾರು..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಪ್ಪನ ಅಗ್ರಹಾರಕ್ಕೆ ನಟ ದರ್ಶನ್ ನೋಡಲು ಬಂದ ಆ ‘ಯುವತಿ’ ಯಾರು..?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ನೋಡಲು ಹಲವಾರು ಅಭಿಮಾನಿಗಳು ತೆರಳುತ್ತಿದ್ದಾರೆ. ಆದರೆ ಯಾರಿಗೂ ಕೂಡ ದರ್ಶನ್ ಭೇಟಿಗೆ ಅವಕಾಶ ನೀಡಿಲ್ಲ.

ಈ ನಡುವೆ ಯುವತಿಯೊಬ್ಬಳು ನಾನು ದರ್ಶನ್ ನೆಂಟರೆಂದು ಹೇಳಿಕೊಂಡು ಜೈಲಿನ ಬಳಿ ಬಂದಿದ್ದಾರೆ. ನಾನು ದರ್ಶನ್ ನೆಂಟರು, ಅವರನ್ನು ನೋಡಬೇಕು ಬಿಡಿ ಎಂದು ಜೈಲಿನ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾಳೆ. ಆದರೆ ಅಧಿಕಾರಿಗಳು ಮಾತ್ರ ದರ್ಶನ್ ಭೇಟಿಗೆ ಅವಕಾಶ ನೀಡಿಲ್ಲ. ನೀಲಿ ಬಣ್ಣದ ಹುಂಡೈ ಕಾರಿನಲ್ಲಿ ಬಂದ ಯುವತಿ ಕ್ಯಾಮೆರಾ ಕಂಡೊಡನೆ ಅಲ್ಲಿಂದ ವಾಪಸ್ ಮರಳಿದ್ದಾರೆ.

ನಟ ದರ್ಶನ್ ಕೂಡ ಯಾರೂ ಭೇಟಿಗೆ ಬರಬೇಡಿ ಎಂದು ಪೊಲೀಸರ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಕೆಲವರು ಜೈಲಿನ ಬಳಿ ತೆರಳಿ ವಾಪಾಸ್ ಆಗುತ್ತಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...