alex Certify ಚಿತ್ರರಂಗದಲ್ಲಿ ಹೆಣಗಾಡುತ್ತಿದ್ದಾಗ ಬಿಟ್ಟುಹೋದ ಪ್ರೇಯಸಿ; ಮತ್ತೆ ಭೇಟಿಯಾದಾಗ ಪಶ್ಚಾತಾಪ ಪಟ್ಟಿದ್ದಳೆಂದ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿತ್ರರಂಗದಲ್ಲಿ ಹೆಣಗಾಡುತ್ತಿದ್ದಾಗ ಬಿಟ್ಟುಹೋದ ಪ್ರೇಯಸಿ; ಮತ್ತೆ ಭೇಟಿಯಾದಾಗ ಪಶ್ಚಾತಾಪ ಪಟ್ಟಿದ್ದಳೆಂದ ನಟ

When Mithun Chakraborty met his girlfriend who left him during his days of struggle: She was feeling guilty

ಬಾಲಿವುಡ್ ನ ಹಿರಿಯ ನಟ ಕಮ್ ರಾಜಕಾರಣಿ ಮಿಥುನ್ ಚಕ್ರವರ್ತಿ ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಗೆಲುವಿಗಾಗಿ ಪರದಾಡುತ್ತಿದ್ದಾಗ ಅವರು ಪ್ರೀತಿಸುತ್ತಿದ್ದ ಹುಡುಗಿ ಬಿಟ್ಟುಹೋದ ಘಟನೆಯನ್ನು ಸ್ಮರಿಸಿದ್ದಾರೆ.

ಖಾಸಗಿ ವಾಹಿನಿಯ ರಿಯಾಲಿಟಿ ಶೋವೊಂದರಲ್ಲಿ ಈ ಘಟನೆ ಸ್ಮರಿಸಿದ ಅವರು ನನ್ನ ಗೆಳತಿ ನನ್ನ ಕೆಟ್ಟ ಸಮಯದಲ್ಲಿ ಬಿಟ್ಟುಹೋದಾಗ ದೊಡ್ಡ ಆಘಾತವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಪ್ರೇಮ ವೈಫಲ್ಯದಿಂದ ನೊಂದಿದ್ದ ಸ್ಪರ್ಧಿಯನ್ನು ಪ್ರೇರೇಪಿಸುವ ವೇಳೆ ಈ ವಿಷಯ ಹೊರಹಾಕಿದ ಮಿಥುನ್ ಚಕ್ರವರ್ತಿ “ನಾನು ಪ್ರೀತಿಯಲ್ಲಿ ಬಿದ್ದಿದ್ದೆ. ಆದರೆ ಅಂದು ಚಿತ್ರರಂಗದಲ್ಲಿ ನಾನಿನ್ನೂ ಹೆಸರು ಮಾಡಿರಲಿಲ್ಲ, ಅದಕ್ಕಾಗಿ ತುಂಬಾ ಹೆಣಗಾಡುತ್ತಿದ್ದೆ. ಆ ಸಮಯದಲ್ಲಿ ನಾನು ಪ್ರೀತಿಸಿದ ಹುಡುಗಿ ನನ್ನನ್ನು ತೊರೆದು ಹೋದಳು. ನಂತರ ನಾನು ಸ್ಟಾರ್ ಆದೆ. ಬರೀ ಸ್ಟಾರ್ ಅಲ್ಲ, ದೊಡ್ಡ ಸೂಪರ್ ಸ್ಟಾರ್ ಆಗಿದ್ದೇನೆ ಎಂದರು.

ವರ್ಷಗಳ ನಂತರ ಮಿಥುನ್ ಚಕ್ರವರ್ತಿ ಆಕೆಯನ್ನು ವಿಮಾನದಲ್ಲಿ ಭೇಟಿಯಾಗಿದ್ದರಂತೆ. ಆದರೆ ಆಕೆ ಮಿಥುನ್ ಚಕ್ರವರ್ತಿರನ್ನು ನೋಡಲು ಸಹ ಹಿಂದೇಟು ಹಾಕುತ್ತಿದ್ದರಂತೆ. ಆಗ ನಾನೇ ಆಕೆಯ ಬಳಿ ಎದ್ದು ಹೋಗಿ ನೀನು ನನ್ನ ಕಣ್ಣಿಂದ ತಪ್ಪಿಸಿಕೊಳ್ಳಲು ಏಕೆ ಪ್ರಯತ್ನಿಸುತ್ತಿದ್ದೀಯ? ಎಂದು ಕೇಳಿದರಂತೆ.

ಆಕೆ ಮಿಥುನ್ ಚಕ್ರವರ್ತಿರನ್ನ ಬಿಟ್ಚುಹೋಗಿದ್ದಕ್ಕೆ ಪಶ್ಚಾತಾಪ ಪಡುತ್ತಿದ್ದರು. ಇದನ್ನರಿತ ನಟ ನಿನಗೆ ಬೇಕಾದ ಜೀವನವನ್ನು ನೀನು ಆರಿಸಿಕೊಂಡೆ. ಬಹುಶಃ ನೀನು ಹಾಗೆ ಮಾಡದೇ ಇದ್ದಿದ್ದರೆ ನಾನು ಇಂದು ಲೆಜೆಂಡ್ ಆಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದರಂತೆ.

ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿರುವ ನಟ ಮಿಥುನ್ ಚಕ್ರವರ್ತಿ, ಮೃಣಾಲ್ ಸೇನ್ ನಿರ್ದೇಶನದ ಮೃಗಯಾ ಚಲನಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದು ಅವರಿಗೆ ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿತು.

ಬಾಲಿವುಡ್‌ನಲ್ಲಿ, ಅವರು ಕೊನೆಯದಾಗಿ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ನಲ್ಲಿ ಕಾಣಿಸಿಕೊಂಡರು. ಅವರು ಬಂಗಾಳಿ ಚಲನಚಿತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕಳೆದ ತಿಂಗಳು, ಮಿಥುನ್ ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...