alex Certify ರಾಜ್ಯದ ಜನ ಬಯಸುವುದು ಮನೆಯಿಂದ ಹೊರಗೆ ಹೋದ ‘ಲಕ್ಷ್ಮಿ’ ಸುರಕ್ಷಿತವಾಗಿ ಬರುವ ಯೋಜನೆ : ಬಿಜೆಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಜನ ಬಯಸುವುದು ಮನೆಯಿಂದ ಹೊರಗೆ ಹೋದ ‘ಲಕ್ಷ್ಮಿ’ ಸುರಕ್ಷಿತವಾಗಿ ಬರುವ ಯೋಜನೆ : ಬಿಜೆಪಿ

ಬೆಂಗಳೂರು : ರಾಜ್ಯದ ಜನ ಬಯಸುವುದು ಮನೆಯಿಂದ ಹೊರಗೆ ಹೋದ ‘ಲಕ್ಷ್ಮಿ’ ಮನೆಗೆ ಸುರಕ್ಷಿತವಾಗಿ ಬರುವ ಯೋಜನೆ ಎಂದು ಬಿಜೆಪಿ ಕಾಂಗ್ರೆಸ್ ಕಾಲೆಳೆದಿದೆ ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು ಟೀಕಿಸಿದೆ.

ಗೃಹ ಲಕ್ಷ್ಮಿ ಕೊಟ್ಟೆವೆಂದು ಬೀಗುವ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ ‘ರಾಜ್ಯದ ಜನ ಬಯಸುತ್ತಿರುವುದು ಮನೆಯಿಂದ ಹೊರಗೆ ಹೋದ ಲಕ್ಷ್ಮಿ ಗೃಹಕ್ಕೆ ಸುರಕ್ಷಿತವಾಗಿ ಬರುವ ಯೋಜನೆಯನ್ನು’. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಮಹಿಳೆಯರಿಗೆ ರಕ್ಷಣೆಯಿಲ್ಲದಂತಾಗಿದೆ.

ಕಳೆದ 7 ತಿಂಗಳಲ್ಲಿ 340 ಅತ್ಯಾಚಾರ ಪ್ರಕರಣಗಳು ದಾಖಲಾಗಿರುವುದು ದೇಶದೆದುರು ಕರ್ನಾಟಕ ರಾಜ್ಯವೇ ತಲೆ ತಗ್ಗಿಸುವಂತಾಗಿದೆ. ರಾಜ್ಯದಲ್ಲಿ ಸರಣಿ ರೂಪದಲ್ಲಿ ಮಹಿಳೆಯರಿಗೆ ಬೆದರಿಕೆಯೊಡ್ಡಿ ದೌರ್ಜನ್ಯ ಹಾಗೂ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿದ್ದರೂ ಅತ್ಯಾಚಾರಿಗಳನ್ನು ಹತ್ತಿಕ್ಕುವಲ್ಲಿ ಸಂಪೂರ್ಣ ವಿಫಲವಾಗಿರುವ ಗೃಹ ಸಚಿವ ಪರಮೇಶ್ವರ್ ಅವರಿಗೆ ಭಗವಂತನೇ ಬುದ್ದಿ ಕರುಣಿಸಬೇಕು ಎಂದು ಬಿಜೆಪಿ ಟ್ವೀಟ್ ಮೂಲಕ ತಿವಿದಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...