alex Certify BIG NEWS: ವಯನಾಡು ಭೂಕುಸಿತ; ಈವರೆಗೆ 133 ಸಾವು; 98 ಮಂದಿ ಇನ್ನೂ ನಾಪತ್ತೆ; ಎಲ್ಲೆಲ್ಲೂ ಸ್ಮಶಾನ ಮೌನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಯನಾಡು ಭೂಕುಸಿತ; ಈವರೆಗೆ 133 ಸಾವು; 98 ಮಂದಿ ಇನ್ನೂ ನಾಪತ್ತೆ; ಎಲ್ಲೆಲ್ಲೂ ಸ್ಮಶಾನ ಮೌನ

ಮಂಗಳವಾರ ಮುಂಜಾನೆ ಎಲ್ಲರೂ ಸುಖನಿದ್ರೆಯಲ್ಲಿದ್ದ ವೇಳೆ ವಯನಾಡಿನ ಮುಂಡಕ್ಕೈ ಮತ್ತು ಚೂರಲ್ಮಲಾದಲ್ಲಿ ದೊಡ್ಡ ದುರಂತವೇ ನಡೆದು ಹೋಗಿದೆ. ಭಾರಿ ಭೂ ಕುಸಿತಕ್ಕೆ ಗ್ರಾಮಗಳೇ ಕೊಚ್ಚಿ ಹೋಗಿದ್ದು, ಗಾಢ ನಿದ್ರೆಯಲ್ಲಿದ್ದವರು ಕಣ್ತೆರೆಯುವ ಒಳಗಾಗಿ ಸಾವಿನ ತೆಕ್ಕೆ ಸೇರಿದ್ದಾರೆ. ಈ ಘೋರ ದುರಂತಕ್ಕೆ ಈವರೆಗೆ 133 ಮಂದಿ ಸಾವನ್ನಪ್ಪಿದ್ದು, 98 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಅಲ್ಲದೆ 481 ಮಂದಿ ಇನ್ನು ರಕ್ಷಣೆ ಮಾಡಲಾಗಿದ್ದು, ಪರಿಹಾರ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ. ಇದೀಗ ಅಲ್ಲಿ ಸ್ಮಶಾನ ಮೌನ ಆವರಿಸಿದ್ದು, ತಮ್ಮವರನ್ನು ಕಳೆದುಕೊಂಡವರ ರೋಧನ ಮುಗಿಲು ಮುಟ್ಟಿದೆ.

ಕಾಣೆಯಾದ ಬಹುತೇಕರು ಕಾಫಿ ಹಾಗೂ ಟೀ ಪ್ಲಾಂಟೇಶನ್ ಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಎನ್ನಲಾಗಿದ್ದು, ಕೆಲವೊಂದು ಪ್ರಕರಣಗಳಲ್ಲಿ ಸಂಪೂರ್ಣ ಕುಟುಂಬವೇ ನಾಪತ್ತೆಯಾಗಿದೆ. ಬಹುತೇಕ ಕೂಲಿ ಕಾರ್ಮಿಕರು ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಿಂದ ವಲಸೆ ಬಂದವರು ಎಂದು ಹೇಳಲಾಗಿದ್ದು, ವಾಸ್ತವ್ಯಕ್ಕಾಗಿ ತಮಗೆ ನೀಡಲಾಗಿದ್ದ ಕಾಟೇಜಿನಲ್ಲಿ ಮಲಗಿದ್ದರು. ಆದರೆ ಬೆಳಗ್ಗೆ ಕಣ್ತೆರೆಯುವ ಮುನ್ನವೇ ಪ್ರಕೃತಿಯ ರೌದ್ರ ನರ್ತನಕ್ಕೆ ಬಾರದ ಲೋಕ ಸೇರಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಭಾರಿ ಮಳೆ ಅಡ್ಡಿಯನ್ನುಂಟು ಮಾಡುತ್ತಿದ್ದು, ಮಂಗಳವಾರ ಬಹು ಹೊತ್ತಿನವರೆಗೂ ನಡೆದ ಕಾರ್ಯಾಚರಣೆ ಈಗಲೂ ಮುಂದುವರೆದಿದೆ.

— ANI (@ANI) July 31, 2024

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...