alex Certify ಸಿಬ್ಬಂದಿಯಿಂದಲೇ ವಾಟರ್ ಬಿಲ್ ಗೆ ಕನ್ನ: ಜಲಮಂಡಳಿ ಸಿಬ್ಬಂದಿ ಸೇರಿ 7 ಮಂದಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಬ್ಬಂದಿಯಿಂದಲೇ ವಾಟರ್ ಬಿಲ್ ಗೆ ಕನ್ನ: ಜಲಮಂಡಳಿ ಸಿಬ್ಬಂದಿ ಸೇರಿ 7 ಮಂದಿ ಅರೆಸ್ಟ್

ಬೆಂಗಳೂರು: ಸಿಬ್ಬಂದಿಯಿಂದಲೇ ಬೆಂಗಳೂರು ಜಲಮಂಡಳಿ ವಾಟರ್ ಬಿಲ್ ಗೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧಿಸಲಾಗಿದೆ.

ಗ್ರಾಹಕರು ಪಾವತಿಸಿದ ಹಣವನ್ನು ಜಳಮಂಡಳಿಗೆ ನೀಡದೆ ವಂಚಿಸಲಾಗಿದೆ. ಹೀಗೆ ವಂಚನೆ ಮಾಡಿದ ಗ್ರೂಪ್ ಸಿ ಮತ್ತು ಡಿ ನೌಕರ ಸೇರಿದಂತೆ 7 ಜನರನ್ನು ಬಂಧಿಸಲಾಗಿದೆ. ರೆವೆನ್ಯೂ ಮ್ಯಾನೇಜರ್ ಆಗಿರುವ ಎಫ್.ಡಿ.ಎ. ನೌಕರ, ಗ್ರೂಪ್ ಡಿ ನೌಕರ. ಐವರು ಗುತ್ತಿಗೆದಾರರನ್ನು ಬೊಮ್ಮನಹಳ್ಳಿ ಠಾಣೆ ಪೋಲೀಸರು ಬಂಧಿಸಿದ್ದಾರೆ.

ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ವಂಚಿಸಿದ ಆರೋಪ ಕೇಳಿ ಬಂದಿತ್ತು. ಒಂದೂವರೆ ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹಿಸಿ ವಂಚಿಸಿದ ಹಿನ್ನೆಲೆಯಲ್ಲಿ ಕೋಡಿಚಿಕ್ಕನಹಳ್ಳಿ ಉಪವಿಭಾಗದ ಎಇಇ ದೂರು ನೀಡಿದ್ದರು. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...