
ನವದೆಹಲಿ: ದೃಷ್ಟಿ ದೋಷವುಳ್ಳವರಿಗೆ ನ್ಯಾಯಾಂಗ ಸೇವೆಗಳಲ್ಲಿ ಉದ್ಯೋಗಾವಕಾಶ ನಿರಾಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ.
ಕೆಲವು ರಾಜ್ಯಗಳಲ್ಲಿ ನ್ಯಾಯಾಂಗ ಸೇವೆಗಳಲ್ಲಿ ಅಂಧ ಅಭ್ಯರ್ಥಿಗಳಿಗೆ ಕೋಟಾ ನೀಡದಿರುವ ಕುರಿತಾಗಿ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣ ಸೇರಿದಂತೆ ಆರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರಿದ್ದ ನ್ಯಾಯ ಪೀಠ ಕಳೆದ ವರ್ಷ ಡಿಸೆಂಬರ್ 3ರಂದು ತೀರ್ಪನ್ನು ಕಾಯ್ತಿರಿಸಿತ್ತು.
ಅಂಗವಿಕಲತೆ ಕಾರಣಕ್ಕೆ ನ್ಯಾಯಾಂಗ ಸೇವೆಯ ನೇಮಕಾತಿಗಳಲ್ಲಿ ಯಾವುದೇ ತಾರತಮ್ಯ ಮಾಡಬಾರದು. ಯಾವುದೇ ವ್ಯಕ್ತಿಯನ್ನು ಅಂಗವೈಕಲ್ಯದ ಕಾರಣದಿಂದ ದೂರ ಇಡುವಂತಿಲ್ಲ. ಅಂಗವಿಕಲತೆಯುಳ್ಳವರನ್ನು ಒಳಗೊಂಡ ನೀತಿ ಚೌಕಟ್ಟು ರೂಪಿಸಲು ರಾಜ್ಯವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೋಮವಾರ ತೀರ್ಪು ಪ್ರಕಟಿಸಿದ ನ್ಯಾಯಪೀಠ ತಿಳಿಸಿದೆ.