
ರಾಜ್ಯ ಗೀತೆಯನ್ನು ಹಾಡುವ ಮೊದಲು ಹುಡುಗ ತನ್ನನ್ನು ತಾನು ಪರಿಚಯಿಸಿಕೊಳ್ಳುತ್ತಾನೆ. ನರೇಂದ್ರ ದೇವ್ ವರ್ಮಾ ಅವರು ಸಂಯೋಜಿಸಿದ ‘ಅರ್ಪಾ ಪೈರಿ ಕೆ ಧಾರ್’ ಗೀತೆಯನ್ನು ನವೆಂಬರ್ 2019 ರಲ್ಲಿ ಅಧಿಕೃತವಾಗಿ ರಾಜ್ಯ ಗೀತೆಯಾಗಿ ಅಳವಡಿಸಿಕೊಳ್ಳಲಾಯಿತು. ರಾಜ್ಯ ಗೀತೆಯ ಶೀರ್ಷಿಕೆಯು ರಾಜ್ಯದ ಎರಡು ಪ್ರಮುಖ ನದಿಗಳಾದ ಅರ್ಪಾ ನದಿ ಮತ್ತು ಪೈರಿ ನದಿಗಳನ್ನು ಉಲ್ಲೇಖಿಸುತ್ತದೆ.
ಇದೀಗ ಧರ್ಮೇಂದ್ರ ರಾಜ್ಯಗೀತೆ ಹಾಡಿರುವ ವಿಡಿಯೋ ಮೈಕ್ರೋಬ್ಲಾಗಿಂಗ್ ವೇದಿಕೆಯಲ್ಲಿ ವೈರಲ್ ಆಗಿದೆ. ಇದನ್ನು 60,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಬಾಲಕ ನೆಟ್ಟಿಗರ ಹೃದಯ ಗೆದ್ದಿದ್ದಾನೆ.
ಈ ಹಿಂದೆ ಸಹದೇವ್ ಎಂಬ ಬಾಲಕ ತನ್ನ ಶಿಕ್ಷಕರ ಮುಂದೆ ಬಚ್ಪನ್ ಕಾ ಪ್ಯಾರ್ ಹಾಡುವ ವಿಡಿಯೋ ರಾತ್ರೋರಾತ್ರಿ ಸಂಚಲನ ಸೃಷ್ಟಿಸಿತ್ತು. ನಂತರ ಸಹದೇವ್ ನನ್ನು ಸಿಎಂ ಬಾಗೇಲ್ ಸನ್ಮಾನಿಸಿದ್ದರು.