
1997ರ ಬಾರ್ಡರ್ ಚಲನಚಿತ್ರದ ‘ಸಂದೇಸೆ ಆತೆ ಹೈ’ ಹಾಡು ಭಾರತೀಯ ಸೇನಾ ಯೋಧರೊಂದಿಗೆ ಅವಿನಾಭಾವ ಸಂಬಂಧವಿದೆ.
ಸೈನಿಕರು ತಮ್ಮ ಮನೆ ಮತ್ತು ಕುಟುಂಬದಿಂದ ದೂರದಲ್ಲಿರುವಾಗ ಅನುಭವಿಸುವ ನೋವು ಮತ್ತು ಹಂಬಲವನ್ನು ಹಾಡು ಪರಿಣಾಮಕಾರಿಯಾಗಿ ತಿಳಿಸುತ್ತದೆ.
ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಸ್ಸಾಂನ ದಿಂಜಾನ್ ಮಿಲಿಟರಿ ಠಾಣೆಗೆ ಭೇಟಿ ನೀಡಿದ್ದರು, ಅಲ್ಲಿ ಅವರು ಗಡಿ ನಿಯಂತ್ರಣ ರೇಖೆಯ ಮೂಲಸೌಕರ್ಯ ಅಭಿವೃದ್ಧಿಯನ್ನು ಪರಿಶೀಲಿಸಿದ್ದಾರೆ.
ಸಂವಾದದ ಸಮಯದಲ್ಲಿ ಸೈನಿಕರು ಉತ್ಸಾಹದಿಂದ ‘ಸಂದೇಸೆ ಆತೆ ಹೇ’ ಹಾಡಿದರು, ಇದನ್ನು ಕೇಳಿ ರಾಜನಾಥ್ ಸಿಂಗ್ ಅವರನ್ನು ಶ್ಲಾಘಿಸಿದ್ದಾರೆ.
1 ನಿಮಿಷ ಮತ್ತು 59 ಸೆಕೆಂಡ್ಗಳ ವೀಡಿಯೊದಲ್ಲಿ, ಸಚಿವರು ತಮ್ಮ ಕೈಯಲ್ಲಿ ಕಪ್ ಹಿಡಿದುಕೊಂಡಿದ್ದು, ಸೈನಿಕರು ಚಪ್ಪಾಳೆ ತಟ್ಟಿ ಇಡೀ ಹಾಡನ್ನು ಹಾಡುವುದನ್ನು ತೋರಿಸುತ್ತದೆ. ಇದನ್ನು ಕಂಡ ಸಾಮಾಜಿಕ ಜಾಲತಾಣ ಬಳಕೆದಾರರು ಭಾವುಕರಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.