alex Certify ಮಲಗಿ ವಿರಮಿಸುತ್ತಿದ್ದ ಕಾರ್ಮಿಕನ ಎಚ್ಚರಗೊಳಿಸಲು ಮುಖದ ಮೇಲೆ ಮೂತ್ರ ವಿಸರ್ಜಿಸಿದ ಮಾಲೀಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲಗಿ ವಿರಮಿಸುತ್ತಿದ್ದ ಕಾರ್ಮಿಕನ ಎಚ್ಚರಗೊಳಿಸಲು ಮುಖದ ಮೇಲೆ ಮೂತ್ರ ವಿಸರ್ಜಿಸಿದ ಮಾಲೀಕ

ಲಖನೌ: ಲಖನೌದ ಚಂದೋಯಿಯ ಖೇಡಾ ಗ್ರಾಮದಲ್ಲಿ ಕಲ್ಲು ಗಣಿಯಲ್ಲಿ ಮಲಗಿ ವಿರಮಿಸುತ್ತಿದ್ದ ದಲಿತ ಕೂಲಿ ಕಾರ್ಮಿಕನ ಎಚ್ಚರಗೊಳಿಸಲು ಆತನ ಮುಖದ ಮೇಲೆ ಮಾಲೀಕ ಮೂತ್ರ ವಿಸರ್ಜನೆ ಮಾಡಿದ್ದಾನೆ.

ಭಾನುವಾರ ಮಧ್ಯಾಹ್ನ ಊಟದ ಬಳಿಕ ದಿನಗೂಲಿ ಕಾರ್ಮಿಕ ರಾಜಕುಮಾರ್ ರಾವತ್ ಮಲಗಿ ವಿರಮಿಸುತ್ತಿದ್ದಾಗ ಮಾಲೀಕ ಕೃತ್ಯವೆಸಗಿದ್ದಾನೆ. ರಾಜಕುಮಾರ್ ಅವರು ಕುಟುಂಬದ ಜೊತೆಗೆ ಕಲ್ಲುಗಣಿ ಸಮೀಪವೇ ವಾಸವಾಗಿದ್ದು, ಕೆಲಸದಿಂದ ದಣಿದಿದ್ದ ಅವರು ಮಧ್ಯಾಹ್ನ ಊಟದ ಬಳಿಕ ವಿರಮಿಸಿದ್ದಾರೆ. ಈ ವೇಳೆ ಕಲ್ಲು ಗಣಿಯ ಮಾಲೀಕ ಸಂಜಯ್ ಮೌರ್ಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ಕೃತ್ಯ ಚಿತ್ರೀಕರಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಂತ್ರಸ್ತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...