ಬೆಂಗಳೂರು : ಮಹಿಳೆಗೆ ಪ್ರಪೋಸ್ ಮಾಡಿದ ಅಂಕಲ್ ಚಾಕು ಇರಿತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹಿತೇಂದ್ರ ಕುಮಾರ್ ಎಂಬುವವರು ಜಯನಗರದಲ್ಲಿ ಬಟ್ಟೆ ಅಂಗಡಿ ಒಂದನ್ನು ನಡೆಸುತ್ತಿದ್ದರು. ಜೂನ್ ನಲ್ಲಿ ಮಹಿಳೆಯೊಬ್ಬರು ಅವರ ಅಂಗಡಿಗೆ ಕೆಲಸಕ್ಕೆ ಸೇರಿದ್ದರು. 2-3 ತಿಂಗಳು ಕೆಲಸ ಮಾಡಿದ ಮಹಿಳೆ ನಂತರ ಕೆಲಸಕ್ಕೆ ಬಂದಿರಲಿಲ್ಲ.ಆಗ ಒಂದು ದಿನ ಹಿತೇಂದ್ರ ಮಹಿಳೆಗೆ ಕರೆ ಮಾಡಿ ಪಾರ್ಕ್ ಗೆ ಬರಲು ಹೇಳಿದ್ದನು. ಮಹಿಳೆ ಪಾರ್ಕ್ ಗೆ ಬರುತ್ತಿದ್ದಂತೆ ಹಿತೇಂದ್ರ ಪ್ರಫೋಸ್ ಮಾಡಿದ್ದಾನೆ. ಇಬ್ಬರು ಕೂಡ ಪಾರ್ಕ್ ನಲ್ಲಿ ಸುತ್ತಾಡಿ ಹೋಗಿದ್ದಾರೆ.
ಮರು ದಿನ ಮತ್ತೆ ಹಿತೇಂದ್ರ ಮಹಿಳೆಯನ್ನು ಪಾರ್ಕ್ ಗೆ ಕರೆದಿದ್ದಾನೆ. ಆದರೆ ಆ ದಿನ ಒಬ್ಬಳೇ ಬಾರದ ಮಹಿಳೆ ಜೊತೆ ಸ್ನೇಹಿತ ಸಿದ್ದು ಎಂಬಾತನನ್ನು ಕರೆದುಕೊಂಡು ಬಂದು ಹಿತೇಂದ್ರನಿಗೆ ಚಾಕುವಿನಿಂದ ಇರಿಯಲು ಹೇಳಿದ್ದಾಳೆ ಎನ್ನಲಾಗಿದೆ. ಅಂತೆಯೇ ಸಿದ್ದು ಹಿತೇಂದ್ರ ಕುಮಾರ್ ಗೆ ಚಾಕು ಹಾಕಿದ್ದಾನೆ. ಅದೃಷ್ಟವಶಾತ್ ಹಿತೇಂದ್ರ ಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ, ಮಹಿಳೆ ಹಾಗೂ ಆತನ ಸ್ನೇಹಿತನ ವಿರುದ್ಧ ಹಿತೇಂದ್ರ ದೂರು ದಾಖಲಿಸಿದ್ದಾರೆ.